ಪುತ್ತೂರು ಪಿಎಲ್ ಡಿ ಬ್ಯಾಂಕ್ ನಲ್ಲಿ ಮಾಜಿ ಅಧ್ಯಕ್ಷ ರಾಮ ಭಟ್ ಹಸಂತಡ್ಕ, ಮಾಜಿ ವ್ಯವಸ್ಥಾಪಕ ಧನಕೀರ್ತಿ ಶೆಟ್ಟಿಯವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಇತ್ತೀಚಿಗೆ ನಿಧನರಾದ ಪುತ್ತೂರು ಪಿಎಲ್ ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ರಾಮ್ ಭಟ್ ಹಸಂತಡ್ಕ ಮತ್ತು ಮಾಜಿ ವ್ಯವಸ್ಥಾಪಕ ಧನಕೀರ್ತಿ ಶೆಟ್ಟಿ ಯವರಿಗೆ ಬ್ಯಾಂಕಿನ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿ, ನುಡಿನಮನ ಸಲ್ಲಿಸುವ ಕಾರ್ಯಕ್ರಮ ಫೆ 7 ರಂದು ಬ್ಯಾಂಕಿನ ಸಭಾಂಗಣದಲ್ಲಿ ಜರಗಿತು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್ ಗೌಡ ಇಚ್ಲಂಪಾಡಿರವರು ಮಾತನಾಡಿ ರಾಮ್ ಭಟ್ ಮತ್ತು ಧನಕೀರ್ತಿ ಶೆಟ್ಟಿ ರವರುಗಳು ಬ್ಯಾಂಕಿನಲ್ಲಿ ಸಲ್ಲಿಸಿದ ಸೇವಾ ಕಾರ್ಯವನ್ನು ಸ್ಮರಿಸಿ, ನುಡಿನಮನ ಸಲ್ಲಿಸಿದರು. ಬ್ಯಾಂಕಿನ‌ ಉಪಾಧ್ಯಕ್ಷ ಸುಜಾತ ರಂಜನ್ ರೈ, ಕೋಶಾಧಿಕಾರಿ ನಾರಾಯಣ ಪೂಜಾರಿ ಕುರಿಕ್ಕಾರ, ನಿರ್ದೇಶಕರುಗಳಾದ ,ರಾಜಶೇಖರ ಜೈನ್‌, ನಾರಾಯಣ ಕನ್ಯಾನ, ಯುವರಾಜ್ ಪೆರಿಯೋತ್ತೋಡಿ, ಪ್ರವೀಣ್ ರೈ ಪಂಜೊಟ್ಟು, ಉಮೇಶ್ ನಾಯ್ಕ್, ಧರ್ಣಪ್ಪ ಮೂಲ್ಯ, ಮೀನಾಕ್ಷಿ ಸೋಮಪ್ಪ ನಾಯ್ಕ್, ಶೀನ ನಾಯ್ಕ ಹಾಗೂ ವ್ಯವಸ್ಥಾಪಕ ಶೇಖರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here