ಬೆಂಕಿ ಅವಘಡದಿಂದ ನಷ್ಟಕ್ಕೊಳಗಾದ ನಾರಾಯಣ ನಾಯ್ಕ್, ಶಿವಪ್ರಸಾದ್ ಮನೆಗೆ ಪುತ್ತಿಲ ಪರಿವಾರದಿಂದ ಆರ್ಥಿಕ ನೆರವು

0

ಪುತ್ತೂರು: ಪಡೀಲ್ ಮನೆಯಲ್ಲಿ ಬೆಂಕಿ ಅವಘಡದಿಂದ ನಷ್ಟಕ್ಕೊಳಗಾದ ಪಡೀಲು ನಾರಾಯಣ ನಾಯ್ಕ್ ಮತ್ತು ಶಿವಪ್ರಸಾದ್ ನಾಯ್ಕ್ ಮನೆ ಮಂದಿಗೆ ಪುತ್ತಿಲ ಪರಿವಾರ ಆರ್ಥಿಕ ನೆರವು ನೀಡಿದೆ.
ಅವಘಡ ನಡೆದ ಸಂದರ್ಭ ಅರುಣ್ ಕುಮಾರ್ ಪುತ್ತಿಲ ತೆರಳಿ ಸಾಂತ್ವನ ಹೇಳಿದ್ದರು. ಫೆ.9ರಂದು ಬೆಳಿಗ್ಗೆ ಅವರು ಮತ್ತೆ ನಾರಾಯಣ ನಾಯ್ಕ್ ಅವರ ಮನೆಗೆ ತೆರಳಿ ಆರ್ಥಿಕ ನೆರವು ನೀಡಿದ್ದಾರೆ. ಪುತ್ತಿಲ ಪರಿವಾರದ ನಗರ ಅಧ್ಯಕ್ಷ ಅನಿಲ್ ತೆಂಕಿಲ, ಚಂದ್ರಹಾಸ ಶೆಟ್ಟಿ ಆನೆಮಜಲು, ಸತೀಶ್ ಭಂಡಾರಿ ನೆಲ್ಲಿಕಟ್ಟೆ, ಪ್ರವೀಣ್ ಭಂಡಾರಿ, ಮನೀಶ್ ಕುಲಾಲ್, ಶರತ್ ರೈ ಸ್ಥಳಿಯರಾದ ಚಂದ್ರಹಾಸ್ ಶೆಟ್ಟಿ ಜೊತೆಗಿದ್ದರು.

LEAVE A REPLY

Please enter your comment!
Please enter your name here