![](https://puttur.suddinews.com/wp-content/uploads/2024/02/886f9a28-5119-4323-b4f9-ff5fd95d2ce0.jpg)
ಪುತ್ತೂರು: ಕಾರಣಿಕದ ಕ್ಷೇತ್ರಗಳಲ್ಲಿ ಒಂದಾದ ಕೊಡಿಪಾಡಿ ಗ್ರಾಮದ ಅರ್ಕ ಶ್ರೀ ಗುಳಿಗ ಕೊರಗಜ್ಜ ಕ್ಷೇತ್ರದಲ್ಲಿ ಫೆ.10ರಿಂದ ಫೆ.12ರ ವರೆಗೆ ಗುಳಿಗ ಕೊರಗಜ್ಜ ದೈವದ ದೊಂದಿ ಬೆಳಕಿನ ವರ್ಷಾವಧಿ ನೇಮೋತ್ಸವ, ಕೊರಗಜ್ಜನಿಗೆ ಬೆಳ್ಳಿಯ ಮುಟ್ಟಲೆ ಸಮರ್ಪಣೆ, ತಂಬಿಲ, ಅಗೆಲುಸೇವೆಗಳು ನಡೆಯಿತು.
![](https://puttur.suddinews.com/wp-content/uploads/2024/02/1-2.jpg)
ಫೆ.10ರಂದು ಬೆಳಿಗ್ಗೆ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯರವರ ನೇತೃತ್ವದಲ್ಲಿ ಮಹಾಗಣಪತಿ ಹೋಮ, ಸ್ಥಳಶುದ್ಧಿ, ಬಳಿಕ ಪುತ್ತೂರಿನ ಉದ್ಯಮಿಯಿಂದ ಶ್ರೀ ಕೊರಗಜ್ಜ ದೈವಕ್ಕೆ ಬೆಳ್ಳಿಯ ಮುಟ್ಟಲೆ ಸಮರ್ಪಣೆ, ದೈವಗಳಿಗೆ ಪರ್ವ ನಡೆಯಿತು.
![](https://puttur.suddinews.com/wp-content/uploads/2024/02/3656de96-c6d0-4d1b-aa93-dea65d21a2ed.jpg)
ಫೆ.11ರಂದು ಸಾಯಂಕಾಲದಿಂದ ವಿವಿಧ ಭಜನಾ ತಂಡಗಳಿಂದ ಭಜನೆ, ಕುಣಿತ ಭಜನೆ ನಡೆಯಿತು. ರಾತ್ರಿ ಗಂಟೆ 7ರಿಂದ ಗುಳಿಗ ದೈವದ ನೇಮ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಕೊರಗಜ್ಜ ದೈವದ ದೊಂದಿ ಬೆಳಕಿನ ನೇಮ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಊರ ಪರವೂರ ನೂರಾರು ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿ, ಹರಕೆ ಸಂದಾಯ ಮಾಡಿದರು.
![](https://puttur.suddinews.com/wp-content/uploads/2024/02/15dd8c57-a079-49b1-ac16-62950e79a3ea.jpg)
ಕ್ಷೇತ್ರದ ಆರಾಧಕರಾದ ಸುಕುಮಾರ ಅಂಚನ್ ರವರು ಅತಿಥಿಗಳನ್ನು ಬರಮಾಡಿಕೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.