ಜೆ.ಇ.ಇ. ಪರೀಕ್ಷೆ – ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳ ಅಮೋಘ ಸಾಧನೆ – ಪ್ರಮಿತ್ ರೈ 99.69, ಆಕಾಶ್ ಶಿರಂತಡ್ಕ 99.47 ಪರ್ಸೆಂಟೈಲ್ ದಾಖಲು

0

14 ಮಂದಿಗೆ ಶೇಕಡಾ 95ಕ್ಕಿಂತಲೂ ಅಧಿಕ, 24 ಮಂದಿಗೆ 90ಕ್ಕಿಂತಲೂ ಹೆಚ್ಚು ಪರ್ಸೆಂಟೈಲ್ ಅಂಕಗಳು
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಓಖಿಂ) ನಡೆಸಿದ ರಾಷ್ಟ್ರಮಟ್ಟದ ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ಕೃಷ್ಟ ಸಾಧನೆ ಮೆರೆದಿದ್ದಾರೆ.

ಪುತ್ತೂರು ಕೆದಂಬಾಡಿಯ ಕೆ. ಪುರಂದರ ರೈ ಮತ್ತು ಕೆ ಮೈನಾ ಪಿ ರೈ ದಂಪತಿಯ ಪುತ್ರ ಕೆ ಪ್ರಮಿತ್ ರೈ (99.69), ಕಾಸರಗೋಡು ಪೆರ್ಲದ ಮಧುಸೂದನ ಎಸ್ ಮತ್ತು ಮಮತಾ ದಂಪತಿಯ ಪುತ್ರ ಆಕಾಶ್ ಶಿರಂತಡ್ಕ (99.47), ಕುಶಾಲನಗರದ ಎ ಯು ಸುಂದರೇಶ್ ಮತ್ತು ಎ ಎಸ್ ಕವಿತಾ ದಂಪತಿಯ ಪುತ್ರ ರಾಹುಲ್ ಎ ಎಸ್ (97.94), ಪುತ್ತೂರು ನರಿಮೊಗರಿನ ಡಾ. ರಾಮಮೋಹನ್ ಎಸ್ ಮತ್ತು ಸಂಧ್ಯಾ ಎಸ್ ದಂಪತಿಯ ಪುತ್ರಿ ಶಾರ್ವರಿ ಎಸ್ (97.90), ಪುತ್ತೂರು ಕೆದಂಬಾಡಿಯ ಸತೀಶ್ ನಾಯಕ್ ಪಿ ಮತ್ತು ಲಾವಣ್ಯ ಎಮ್ ಬಿ ದಂಪತಿಯ ಪುತ್ರಿ ಶೃಂಗ ನಾಯಕ್ ಪಿ (97.31), ಸುಳ್ಯ ಜಯನಗರದ ಶ್ರೀಧರ ಎ ಮತ್ತು ಮಾಲಿನಿ ಎನ್ ದಂಪತಿಯ ಪುತ್ರಿ ಅನುಶ್ರೀ ಎ ಎಸ್ (96.79), ಬಂಟ್ವಾಳ ಪೆರಮೊಗ್ರುವಿನ ಕೆ ವಿ ತಿರುಮಲೇಶ್ವರ ಭಟ್ ಮತ್ತು ಕೆ ಟಿ ಆಶಾ ದಂಪತಿಯ ಪುತ್ರ ಅಭಿರಾಮ ಕೆ. ಟಿ (96.71), ಬಂಟ್ವಾಳದ ಕುಡುಪಲ್ಲತಡ್ಕದ ವೆಂಕಪ್ಪ ಶರ್ಮ ಕೆ ಮತ್ತು ಸಹನಾ ಬಿ ದಂಪತಿಯ ಪುತ್ರ ವಿಶಾಂತ್ (96.16), ಬಂಟ್ವಾಳ ಕೊಳ್ನಾಡಿನ ಶಶಿಧರ ಭಂಡಾರಿ ಮತ್ತು ಸಂಧ್ಯಾ ಎಸ್ ಭಂಡಾರಿ ದಂಪತಿಯ ಪುತ್ರ ಅನುನಯ ಎಸ್ ಭಂಡಾರಿ (95.72), ಕಡಬ ಕಾಣಿಯೂರಿನ ನಿರಂಜನ ಕೆ ಎನ್ ಮತ್ತು ಸ್ವರ್ಣಲತಾ ಎನ್ ಆಚಾರ್ಯ ದಂಪತಿಯ ಪುತ್ರ ನಿಧಿ ಎನ್ ಆಚಾರ್ಯ (95.62), ಬಂಟ್ವಾಳ ಅಡ್ಯನಡ್ಕದ ವಿಶ್ವನಾಥ್ ಎಂ ಮತ್ತು ರಮ್ಯ ಎಮ್ ದಂಪತಿಯ ಪುತ್ರ ವರುಣ್ ಎಮ್ (95.43), ಸುಳ್ಯ ಜಯನಗರದ ಶ್ರೀಧರ ಎ ಮತ್ತು ಮಾಲಿನಿ ಎನ್ ದಂಪತಿಯ ಪುತ್ರಿ ಅಭಿಶ್ರೀ ಎ ಎಸ್ (95.16), ಪುತ್ತೂರು ಸಾಮೆತಡ್ಕದ ಎಮ್ ಪ್ರತಾಪ್‌ಚಂದ್ರ ರೈ ಮತ್ತು ಶಶಿಕಲಾ ಪಿ ರೈ ದಂಪತಿಯ ಪುತ್ರ ಗಗನ್‌ದೀಪ್ ರೈ (95.09), ಪುತ್ತೂರು ದರ್ಬೆಯ ರಾಮಕೃಷ್ಣ ಪ್ರಕಾಶ್ ಬಿ ಮತ್ತು ಸುಜಾತ ಎಮ್ ದಂಪತಿಯ ಪುತ್ರ ಚೈತನ್ಯ ಬಿ (95), ಪುತ್ತೂರು ಚಿಕ್ಕಮೂಡ್ನೂರಿನ ಗ್ರೆಗೊರಿ ರೋನಿ ಪಾಯ್ಸ್ ಮತ್ತು ಮಾಬೆಲ್ ರೊಡ್ರಿಗಸ್ ದಂಪತಿಯ ಪುತ್ರಿ ಅನುಶಾ ಜೇನ್ ಪಾಯ್ಸ್ (94.37), ಪುತ್ತೂರು ಕೊಂಬೆಟ್ಟಿನ ಎಚ್ ವೆಂಕಟ್ರಾಯ ಪ್ರಭು ಮತ್ತು ಎಚ್ ವಿದ್ಯಾ ಪ್ರಭು ದಂಪತಿಯ ಪುತ್ರ ಎಚ್ ಸಮರ್ಥ್ ಪ್ರಭು (94.27), ಬಂಟ್ವಾಳ ತಾಲೂಕು ಕಲ್ಲಿಗೆಯ ಶಿವಪ್ರಸಾದ್ ಕೆ ಮತ್ತು ಗೀತಾ ದಂಪತಿಯ ಪುತ್ರ ಪ್ರಥಮ್ ಎಸ್ (94.02), ಪುತ್ತೂರು ಮೊಟ್ಟೆತಡ್ಕದ ಗಣಪತಿ ಪಿ ಮತ್ತು ಸುಧಾ ಕೆ ದಂಪತಿಯ ಪುತ್ರ ಪವನ್ ಕುಮಾರ್ ಪಿ (93.95), ಸುಳ್ಯಪದವಿನ ಸೀತಾರಾಮ ಮೂಲ್ಯ ಎಸ್ ಮತ್ತು ಮಮತ ಬಿ ಡಿ ದಂಪತಿಯ ಪುತ್ರ ಸೃಜನ್ ಕುಮಾರ್ ಜಿ ಎಸ್ (93.62), ಬಂಟ್ವಾಳ ಅಡ್ಯನಡ್ಕದ ಎಸ್ ಶಂಕರನಾರಾಯಣ ಮತ್ತು ಸ್ವೌಮ್ಯ ಪ್ರಸನ್ನ ದಂಪತಿಯ ಪುತ್ರ ಗಣೇಶ್ ರಾಮ (93.33), ಸುಳ್ಯ ಮಣಿಕ್ಕರದ ಪದ್ಮನಾಭ ಕೆ ಮತ್ತು ವಿಶಾಲಾಕ್ಷಿ ದಂಪತಿಯ ಪುತ್ರಿ ಚಂದನಲಕ್ಷ್ಮಿ ಪಿ ಎನ್ (92.58), ಪುತ್ತೂರು ನೆಹರುನಗರದ ಹರೀಶ್ ಬಿ ಮತ್ತು ಪುಷ್ಪಲತಾ ಬಿ ದಂಪತಿಯ ಪುತ್ರಿ ಪೂರ್ವಿ ಎಚ್ ರಾವ್ (91.75) , ಈಶ್ವರಮಂಗಲದ ಕೃಷ್ಣಪ್ಪ ಗೌಡ ಎಂ ಮತ್ತು ಕೋಮಲ ಎಮ್ ದಂಪತಿಯ ಪುತ್ರಿ ಕೃತಿ ಕೆ ಎಮ್ (91.45), ಪುತ್ತೂರು ಬೊಳ್ವಾರಿನ ಶಶಿ ಕೆ ಕೆ ಮತ್ತು ಶ್ಯಾಮಲಾ ಸಿ ದಂಪತಿಯ ಪುತ್ರ ಹರಿಪ್ರಸಾದ್ ಕೆ ಎಸ್ (90.02) ಇವರುಗಳು ಉತ್ತಮ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here