ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದಲ್ಲಿ 36ನೇ ವಾರ್ಷಿಕೋತ್ಸವ, ರಥೋತ್ಸವ ಸಮಾರಂಭ

0

ಪುತ್ತೂರು: ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀರಾಮ ದೇವರು, ಶ್ರೀರಾಮ ಬಳಗ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪ್ರತಿಷ್ಠಾಪನೆಯ 36ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಸಮಾರಂಭ ಫೆ.13ರಂದು ನಡೆಯಿತು.

ಬೆಳಿಗ್ಗೆ ಪ್ರತಿಷ್ಠಾ ಸಂಬಂಧವಾದ ಹೋಮ, ಶ್ರೀ ಬೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಿತು.
ಬೆಳಿಗ್ಗೆ ಗಂಟೆ 6ರಿಂದ ಸಂಜೆ 6ರ ವರೆಗೆ ಅರ್ದ ಏಕಾಹ ಭಜನೆ, ಸಂಜೆ ಗಂಟೆ 6ರಿಂದ ವಿದ್ಯಾನ್ ಗೋಪಾಲಕೃಷ್ಣ ವಿರಚಿತ ಕಾರಣಿಕದ ಕಲ್ಲುರ್ಟಿ ನೃತ್ಯ ರೂಪಕ ಪ್ರದರ್ಶನ ಗಮನ ಸೆಳೆಯಿತು.
ರಾತ್ರಿ ಗಂಟೆ 8-30ರಿಂದ ರಂಗಪೂಜೆ, ರಥೋತ್ಸವ, ವಸಂತ ಕಟ್ಟೆ ಪೂಜೆ, ಅಷ್ಟಾವಧಾನ ಸೇವೆ, ತೊಟ್ಟಿಲು ಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here