ಅಡಿಕೆ ವ್ಯಾಪಾರಿ ಕರುಣಾಕರ ರೈ ಬಾಲ್ಯೊಟ್ಟು ನಿಧನಕ್ಕೆ ಪುತ್ತೂರು ಎಪಿಎಂಸಿ ಅಡಿಕೆ ವರ್ತಕರ ಸಂಘದಿಂದ ಸಂತಾಪ

0

ಪುತ್ತೂರು: ಫೆ.14 ರಂದು ನಿಧನರಾದ ಅಡಿಕೆ ವ್ಯಾಪಾರಿ, ಪುತ್ತೂರು ಎಪಿಎಂಸಿ ಅಡಿಕೆ ವರ್ತಕರ ಸಂಘದ ಸದಸ್ಯ ಕರುಣಾಕರ ರೈ ಬಾಲ್ಯೊಟ್ಟು ನಿಧನಕ್ಕೆ ಪುತ್ತೂರು ಎಪಿಎಂಸಿ ಅಡಿಕೆ ವರ್ತಕರು ಫೆ.14 ರಂದು ಸಾಂಕೇತಿಕವಾಗಿ ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಿ, ಸಂತಾಪ ಸೂಚಿಸಿದರು. ಕರುಣಾಕರ ರೈ ಬಾಲ್ಯೋಟ್ಟು ಅಡಿಕೆ ವ್ಯಾಪಾರಿಯಾಗಿ ಕಳೆದ 25 ವರ್ಷಗಳಿಂದ ಸೇವೆ ಮಾಡುತ್ತಿದ್ದು, ಉತ್ತಮ ಸಂಘಟಕರಾಗಿ, ಸಮಾಜಮುಖಿ ಕಾರ್‍ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪುತ್ತೂರು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್.ರವೀಂದ್ರನಾಥ ರೈ ಬಳ್ಳಮಜಲು ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here