ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ “ರಥಸಪ್ತಮಿ” ಕಾರ್ಯಕ್ರಮ

0

ಪುತ್ತೂರು : ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಫೆ.16 ರಂದು ರಥಸಪ್ತಮಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ,ಯೋಗ ಸಂಯೋಜಕರು, ಸಂವಿತ್ ರಿಸರ್ಚ್ ಸೆಂಟರ್, ಮಂಗಳೂರಿನ ಸಂಜಯ್ ಸಿ.ವಿ ಉತ್ತಮ ಸ್ವಾಸ್ತ್ಯದತ್ತ ನಮ್ಮ ದೃಢ ಚಿತ್ತವಿರಿಸುತ್ತಾ ಎಲ್ಲರೂ ಪ್ರತಿದಿನ ಸೂರ್ಯನಮಸ್ಕಾರವನ್ನು ಮಾಡಬೇಕೆಂಬ ಪ್ರೇರಣಾದಾಯಕ ನುಡಿಗಳನ್ನಾಡಿದರು.

ಶಾಲೆಯ ಆಡಳಿತ ಮಂಡಳಿ ಸದಸ್ಯೆ ಶಂಕರಿ ಶರ್ಮ , ರಥಸಪ್ತಮಿಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಲಿ. ಎಲ್ಲರಿಗೂ ಆರೋಗ್ಯ ನಿರಂತರವಾಗಲಿ ಎಂದರು.

ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಸೂರ್ಯನಮಸ್ಕಾರ ಪ್ರದರ್ಶನ ನೀಡಿದರು. ಶಾಲೆಯ ಪ್ರಾಂಶುಪಾಲೆ ಸಿಂಧು ವಿ.ಜಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ನವೀನ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here