ಆರೋಗ್ಯದಲ್ಲಿ ಏರುಪೇರು: ಕೆಲಸಕ್ಕೆ ಬಂದಿದ್ದ ಕೇರಳ ನಿವಾಸಿ ಗೋಳಿತ್ತೊಟ್ಟಿನಲ್ಲಿ ಮೃತ್ಯು

0

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿಗೆ ಕೆಲಸಕ್ಕೆ ಬಂದಿದ್ದ ಕೇರಳ ನಿವಾಸಿಯೊಬ್ಬರು ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟ ಘಟನೆ ಫೆ.17ರಂದು ನಡೆದಿದೆ.


ಕೇರಳ ಎರ್ನಾಕುಲಂ ಜಿಲ್ಲೆಯ ಮುವಾಟಪುರ ತಾಲೂಕಿನ ಪ್ಲಾತೋಟ ಮನೆಯ ಸಜೀ ಫ್ರಾನ್ಸಿಸ್(45ವ.)ಮೃತಪಟ್ಟವರಾಗಿದ್ದಾರೆ. ಸಜೀ ಫ್ರಾನ್ಸಿಸ್ ಅವರು ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ನಿವಾಸಿ ರೆಜಿಶ್ ಎಂಬವರ ಮನೆಗೆ ಮೂರು ದಿನದ ಹಿಂದೆ ಕೆಲಸಕ್ಕೆ ಬಂದಿದ್ದರು. ಫೆ.17ರಂದು ಮುಂಜಾನೆ ಸಜೀ ಫ್ರಾನ್ಸಿಸ್ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ರೆಜಿಶ್ ಅವರು ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಸಂಜೆ ಪುನ: ಆರೋಗ್ಯದಲ್ಲಿ ಏರು ಪೇರು ಉಂಟಾಗಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರಿಕ್ಷೀಸಿದಾಗ ಮೃತಪಟ್ಟಿದ್ದರು. ಸಜೀ ಪ್ರಾನ್ಸಿಸ್‌ರವರು ಯಾವುದೋ ಗಂಭೀರ ಖಾಯಿಲೆಯಿಂದ ಮೃತ ಪಟ್ಟಿರುವುದಾಗಿದೆ ಎಂದು ರೆಜಿಶ್ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here