ಅರೆಲ್ತಡಿ: ನಾಪತ್ತೆಯಾಗಿದ್ದ ಬಾಲಕ ಪತ್ತೆ – ಮನೆ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಅವಿತುಕೊಂಡಿದ್ದ ಬಾಲಕ

0

ಪುತ್ತೂರು: ಫೆ.19ರಂದು ಮನೆಯಿಂದ ಹೊರಟು ಶಾಲೆಗೂ ಬಾರದೆ ಮನೆಗೂ ಹಿಂದಿರುಗದೆ ಕಾಣೆಯಾಗಿದ್ದ ಅರೆಲ್ತಡಿ ನಿವಾಸಿ ಅಶೋಕ ಹಾಗೂ ವನಿತಾ ದಂಪತಿ ಪುತ್ರ ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿ ಅಶ್ವಥ್‌ (13) ಪತ್ತೆಯಾಗಿದ್ದಾನೆ. ಬಾಲಕ ಅಶ್ವಥ್‌ ಶಾಲೆಗೆ ತೆರಳದೆ ಮನೆ ಸಮೀಪದ ನಿಮಾಣ ಹಂತದಲ್ಲಿದ್ದ ಮನೆಯೊಂದರಲ್ಲಿ ಅವಿತುಕೊಂಡಿದ್ದ. ಮನೆಯವರು ಮತ್ತು ಊರಿನವರು ಹುಡುಕಾಟ ನಡೆಸಿದಾಗ ನಿರ್ಮಾಣ ಹಂತದ ಮನೆಯಲ್ಲಿ ಅವಿತುಕೊಂಡಿದ್ದ ಬಾಲಕ ಪತ್ತೆಯಾಗಿದ್ದಾನೆ. ಬಾಲಕ ಕಾಣೆಯಾಗಿದ್ದಾನೆಂಬ ಸುದ್ದಿ ಹರಡುತ್ತಿದ್ದಂತೆ ಮನೆ ಮಂದಿ ಸಹಿತ ಊರಿನವರು, ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಬಾಲಕ ನಾಪತ್ತೆಯಾದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

LEAVE A REPLY

Please enter your comment!
Please enter your name here