SKSSF ಕಟ್ಟತ್ತಾರು ಶಾಖೆಯಿಂದ ಸ್ಥಾಪಕ ದಿನಾಚರಣೆ

0

ಪುತ್ತೂರು: SKSSF ಕಟ್ಟತ್ತಾರು ಶಾಖೆಯಿಂದ ಕಟ್ಟತ್ತಾರು ಜಂಕ್ಷನ್ ನಲ್ಲಿ ಸ್ಥಾಪಕ ದಿನ ಆಚರಿಸಲಾಯಿತು. ಶಾಖಾಧ್ಯಕ್ಷ ಅಶ್ರಫ್ ಕೆ ಪಿ ಅಧ್ಯಕ್ಷತೆಯಲ್ಲಿ ಸಮಸ್ತ ಕೇರಳ ಜಂಯ್ಯತುಲ್ ಉಲಮಾ ಪುತ್ತೂರು ತಾಲ್ಲೂಕು ಕೋಶಾಧಿಕಾರಿ ಬಹು ಶೈಖುನಾ ಉಮರ್ ಉಸ್ತಾದ್ ನಂಜೆ ಧ್ವಜಾರೋಹಣಗೈದರು.

ಕುಂಬ್ರ ರೇಂಜ್ ಜಂಯ್ಯತುಲ್ ಮುಅಲ್ಲಿಂನ ಉಪಾಧ್ಯಕ್ಷ ಬಹು ಆಬೂಬಕ್ಕರ್ ದಾರಿಮಿ ಉಸ್ತಾದ್ ಕಟ್ಟತ್ತಾರು ದುಅ ನೇತೃತ್ವ ವಹಿಸಿದ್ದರು.ಶಾಖಾ ಮಾಜಿ ಅಧ್ಯಕ್ಷ ಬಹು ಶಮೀರ್ ಪೈಝಿ ಕಟ್ಟತ್ತಾರು ಮಾತನಾಡಿ ಸಮಸ್ತದ ಮಹತ್ವ SKSSF ನಡೆದು ಬಂದ ಹಾದಿಯನ್ನು ಮತ್ತು ಸಮ್ತಸದ ನಾಯಕರನು ಸ್ಮರಸಿ ಅವರು ಸೇವೆಯನ್ನು ಗುರುತಿಸಿ ಅದೇ ಸಮಸ್ತ ಹಾದಿಯಲ್ಲಿ ಮರಣ ತನಕ ಧೃಡವಾಗಿ ನಿಲ್ಲಿ ಎಂದರು .

ಕಾರ್ಯಕ್ರಮದಲ್ಲಿ ಶಾಖಾ ಕೋಶಾಧಿಕಾರಿ ಅಬೂಬಕರ್ ಕಟ್ಟತ್ತಾರು, ಬಿ.ಎಂ. ಉಮರ್ ಹಾಜಿ ಕಟ್ಟತ್ತಾರು, ಪುತ್ತು ಹಾಜಿ ಕಟ್ಟತ್ತಾರು,ಯೂಸುಫ್ ಹಾಜಿ ಕಟ್ಟತ್ತಾರು, ಮುಹಮ್ಮದ್ ಕೋಟ್ರಾಸ್, ಖಾಲಿದ್ ಸಂಟ್ಯಾರ್ ,ನವೀದ್ ನಿಡ್ಯಾಣ, ಸಿ.ಬಿ. ಬಶೀರ್ ಕಟ್ಟತ್ತಾರು, ಶಾಪಿ ನಿಡ್ಯಾಣ ,ಸಮದ್ ಸಂಟ್ಯಾರ್, ಮುಹಮ್ಮದ್ ನಿಡ್ಯಾಣ, ಹಮೀದ್ ನಿಡ್ಯಾಣ, ಅಬ್ಬಾಸ್ ನಿಡ್ಯಾಣ, ಅನ್ವರ್ ಅಲಿ ಕಟ್ಟತ್ತಾರು, ಫಾರೂಖ್ ಕಟ್ಟತ್ತಾರು ಸ್ವಫ್ವಾನ್ ಬೇರಿಕೆ , ಇನ್ನಿತರ ಹಲವಾರು ಉಲಮಾ ಉಮರಾ ನಾಯಕರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here