ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ಸಹಾಯಧನ ಚೆಕ್ ವಿತರಣೆ

0

ನೆಲ್ಯಾಡಿ: ಒಕ್ಕಲಿಗ ಸ್ವ ಸಹಾಯ ಸಂಘಗಳ ಕೊಣಾಲು ಒಕ್ಕೂಟದ ಶ್ರೀ ವಿಷ್ಣು ಸಂಘದ ಸದಸ್ಯ ವಿಶ್ವನಾಥ ಗೌಡ ಶಾಂತಿಮಾರು ಇವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದು, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ವತಿಯಿಂದ ನೀಡುವ ಮರಣ ಸಾಂತ್ವನ ಸಹಾಯಧನದ ಚೆಕ್ ನ್ನು ಕೊಣಾಲು ಒಕ್ಕೂಟದ ಮಾಜಿ ಅಧ್ಯಕ್ಷ ನೋಣಯ್ಯ ಗೌಡ ಡೆಬ್ಬೇಲಿ, ನೂತನ ಅಧ್ಯಕ್ಷ ಲಕ್ಷ್ಮಣ ಗೌಡ ಗೌರ್ಲೆ, ಒಕ್ಕಲಿಗ ಗ್ರಾಮ ಸಮಿತಿ ಯುವಘಟಕದ ಅಧ್ಯಕ್ಷ ಗಂಗಾಧರ ಗೌಡ ಕೋಲ್ಪೆ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಲಿತ ತಿರ್ಲೆ ಇವರುಗಳು ಮೃತರ ಪತ್ನಿ ಕೊಣಾಲು ಶ್ರೀ ಸಂಘದ ಸದಸ್ಯೆ ಪ್ರೇಮಲತಾರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಸುಮಲತಾ, ಪ್ರೇರಕರಾದ ಪರಮೇಶ್ವರ ಗೌಡ ಕೊಂಬಾರು, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here