ಭಾರತೀಯ ಹಿಂದಿ ಪ್ರಾಧ್ಯಾಪಕ ಪರಿಷದ್‌ನ ರಾಷ್ಟ್ರೀಯ ಕಾರ್ಯಕಾರಿಣೆ ಸದಸ್ಯರಾಗಿ ಡಾ.ಎಸ್.ಎ.ಮಂಜುನಾಥ ಆಯ್ಕೆ

0

ಪುತ್ತೂರು: ಭಾರತೀಯ ಹಿಂದಿ ಪ್ರಾಧ್ಯಾಪಕ ಪರಿಷದ್ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಪ್ರಾಧ್ಯಾಪಕ ಸಂಘ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಅಲಾಯನ್ಸ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರಥಮ ರಾಷ್ಟ್ರೀಯ ಅಧಿವೇಶನದಲ್ಲಿ ಭಾರತೀಯ ಹಿಂದಿ ಪ್ರಾಧ್ಯಾಪಕ ಪರಿಷದ್‌ನ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಿತಿಯ ಕರ್ನಾಟಕದ ಸದಸ್ಯರಾಗಿ ರಾಜ್ಯ ವಿಶ್ವವಿದ್ಯಾಲಯ ಕಾಲೇಜು ಹಿಂದಿ ಪ್ರಾಧ್ಯಾಪಕ ಸಂಘದ ಅಧ್ಯಕ್ಷ ಡಾ.ಎಸ್.ಎ.ಮಂಜುನಾಥರವರು ಆಯ್ಕೆಯಾಗಿದ್ದಾರೆ.

ಪುತ್ತೂರಿನ ಕೆಮ್ಮಿಂಜೆ ಲಕ್ಷ್ಮಿ ಪ್ರಸನ್ನ ಲೇಔಟಿನ ನಿವಾಸಿಯಾದ ಇವರು ಮಂಗಳೂರು ಐಕಳ ಪೂಂಪೈ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾಗಿ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕರ ಸಂಘದ ಕೋಶಾಧ್ಯಕ್ಷರಾಗಿ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕ ಫೆಡರೇಷನ್‌ನ ಸಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here