ನಾಳೆ(ಮಾ.5) ಮಿತ್ತೂರಿನಲ್ಲಿ “ಮಿಹ್ರಾಬ್” ಜಿಲ್ಲಾ ಖತೀಬರ ಸಂಗಮ

0

ಪುತ್ತೂರು: ಸಮಸ್ತ ಕೇರಳ ಜಂ ಇಯ್ಯತುಲ್ ಖುತಬಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ನಾಳೆ ಮಿತ್ತೂರು ಮದ್ರಸಾ ಸಭಾಂಗಣದಲ್ಲಿ ಮಿಹ್ರಾಬ್- 2024 ಜಿಲ್ಲಾ ಖತೀಬರ ಸಂಗಮ ನಡೆಯಲಿದೆ ಎಂದು ಸಮಸ್ತ ಜಂ ಇಯ್ಯತುಲ್ ಖುತಬಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ತಿಳಿಸಿದ್ದಾರೆ.


ಬೆಳಿಗ್ಗೆ ಮಿತ್ತೂರು ಜಮಾಅತ್ ಅಧ್ಯಕ್ಷರಾದ ಕೆ.ಬಿ ಸಲೀಂ ರವರು ಧ್ವಜಾರೋಹಣಗೈಯ್ಯಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಉಸ್ತಾದ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ವಹಿಸಲಿದ್ದು,ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ತಾದ್ ಬಂಬ್ರಾಣ ಅಬ್ದುಲ್ ಖಾದರ್ ಖಾಸಿಮಿ ಉದ್ಘಾಟನೆ ಗೈಯ್ಯಲಿದ್ದಾರೆ.ಚೆಮ್ಮಾಡ್ ದಾರುಲ್ ಹುದಾ ವಿಶ್ವ ವಿದ್ಯಾಲಯದ ಪ್ರೊಫೆಸರ್ ಉಸ್ತಾದ್ ಕೆ.ಸಿ ಮುಹಮ್ಮದ್ ಬಾಖವಿ ವಿಷಯ ಮಂಡನೆ ಗೈಯ್ಯಲಿದ್ದಾರೆ.


ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಉಸ್ತಾದ್ ಉಸ್ಮಾನುಲ್ ಫೈಝಿ ತೋಡಾರು ನೋಂದಾಯಿತ ಖತೀಬ್ ಉಸ್ತಾದರುಗಳಿಗೆ ಗುರುತು ಕಾರ್ಡ್ ವಿತರಿಸಲಿದ್ದಾರೆ.ಜಂಇಯ್ಯತುಲ್ ಖುತಬಾ ಕೇಂದ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ,ಜಿಲ್ಲಾಧ್ಯಕ್ಷರಾದ ಅಬ್ಬಾಸ್ ದಾರಿಮಿ ಕೆಲಿಂಜ,ಸಯ್ಯಿದ್ ಅಲಿ ಮನ್ನಾನಿ ಮಿತ್ತೂರು,ಹಂಝ ಕಂದಕ್ ಮಿತ್ತೂರು ಶುಭ ಹಾರೈಸಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here