ತುಮಕೂರಿನಲ್ಲಿ ಪೊಲೀಸ್  ವಶದಿಂದ ಬಿಡುಗಡೆಗೊಂಡ ಬಜರಂಗದಳ‌ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರಿಗೆ ಪುತ್ತೂರಿನಲ್ಲಿ ಸ್ವಾಗತ

0

ಪುತ್ತೂರು: ತುಮಕೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ತೆರಳುತ್ತಿದ್ದ ವೇಳೆ ಪೊಲೀಸ್ ವಶವಾದ ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ‌ ಮುರಳಿಕೃಷ್ಣ ಹಸಂತಡ್ಕ ಅವರು ಬಿಡುಗಡೆಗೊಂಡು ಪುತ್ತೂರಿಗೆ ಆಗಮಿಸಿದಾಗ ಕಾರ್ಯಕರ್ತರು‌ ಅವರನ್ನು ಬೊಳುವಾರಿನಲ್ಲಿ ಕೇಸರಿ ಶಲ್ಯ ಹಾಕುವ ಮೂಲಕ ಸ್ವಾಗತಿಸಿದರು.

ಮುರಳಿಕೃಷ್ಣ ಹಸಂತಡ್ಕ ಅವರು ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದ ಎದುರು ಕಾರಿನಿಂದ ಇಳಿದು ಆಂಜನೇಯ ಸ್ವಾಮಿಗೆ ನಮಸ್ಕರಿಸಿ ಕಾರ್ಯಕರ್ತರಿಂದ ಶಲ್ಯ, ಹಾರವನ್ನು ಪಡೆದು ಕೊಂಡರು. ಮುರಳುಕೃಷ್ಣ ಹಸಂತಡ್ಕ ಅವರ ಜೊತೆಗಿದ್ದ ವಿಹಿಂಪದ ಜಯಂತ್‌ ಕುಂಜೂರುಪಂಜ ಅವರಿಗೂ ಶಲ್ಯ ಹಾಕಿ ಸ್ವಾಗತಿಸಲಾಯಿತು.

LEAVE A REPLY

Please enter your comment!
Please enter your name here