ಧರಿತ್ರಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿ 9 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ

0

ಪುತ್ತೂರು: ಮುರದಲ್ಲಿ ಕಛೇರಿ ಹೊಂದಿರುವ ಧರಿತ್ರಿ ಸೌಹಾರ್ದ ಸಹಕಾರಿ ಸಂಘದ ಮುಂದಿನ 5 ವರ್ಷದ ಅವಧಿಯ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಲ್ಲಿ 9 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.

ಸಾಮಾನ್ಯ ಸ್ಥಾನದಿಂದ ಹಳೆನೇರಂಕಿ ನಿವಾಸಿ ವಸಂತ ಪಿ, ಪೋಯ ನಿವಾಸಿ ಮೋಹನ ಗೌಡ ಪಿ, ಶಾಂತಿಗೋಡು ನಿವಾಸಿ ರಕ್ಷಿತ್ ಪಿ, ಕಬಕ ನಿವಾಸಿ ಪ್ರೇಮಾ, ಕೊಂಬೆಟ್ಟು ನಿವಾಸಿ ಪ್ರಕಾಶ್ ಗೌಡ, ಬನ್ನೂರು ನಿವಾಸಿ ಬಿ.ವಿಶ್ವನಾಥ ಗೌಡ ಆಯ್ಕೆಯಾಗಿದ್ದಾರೆ. ಪ.ಪಂಗಡ ಸ್ಥಾನದಿಂದ ಕಬಕ ನಿವಾಸಿ ಚಿತ್ರಾ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಬಿ. ಸ್ಥಾನದಿಂದ ಕಬಕ ನಿವಾಸಿ ವಸಂತ ಗೌಡ ಪಿ. ಆಯ್ಕೆಯಾಗಿದ್ದಾರೆ. ಮಹಿಳಾ ಸ್ಥಾನದಿಂದ ಶಿಬರಿಗುರಿ ನಿವಾಸಿ ರಶ್ಮೀ ಆಯ್ಕೆಯಾಗಿದ್ದಾರೆ. ಪ.ಜಾತಿ ಸ್ಥಾನ, ಹಿಂದುಳಿದ ವರ್ಗ ಎ. ಸ್ಥಾನ ಹಾಗೂ 1 ಸಾಮಾನ್ಯ ಮತ್ತು 1 ಮಹಿಳಾ ಸ್ಥಾನದಿಂದ ಯಾವುದೇ ಅಭ್ಯರ್ಥಿಗಳು ಆಯ್ಕೆಯಾಗಿಲ್ಲ. ನವೀನ್ ಕುಮಾರ್ ಎಂ.ಎಸ್.ರವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಸಿಬ್ಬಂದಿಗಳು ಸಹಕರಿಸಿದರು.

ಅಧ್ಯಕ್ಷ/ಉಪಾಧ್ಯಕ್ಷರ ಆಯ್ಕೆ:
ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಸಂತ ಗೌಡ ಪೊಳ್ಯ ಹಾಗೂ ಉಪಾಧ್ಯಕ್ಷರಾಗಿ ಮೋಹನ್ ಗೌಡ ಪಿ.ರವರನ್ನು ಅವಿರೋಧ ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here