ನಾಟಿವೈದ್ಯ ವಾಸುದೇವ ಇಡ್ಯಾಡಿಯವರಿಗೆ ಕೋಟೆಕಾರ್ ಶೃಂಗೇರಿ ಮಠದಲ್ಲಿ ಸನ್ಮಾನ

0

ಪುತ್ತೂರು:ನಾಟಿವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಗಾಗಿ ಜನಪ್ರಿಯ ನಾಟಿವೈದ್ಯ ಸವಣೂರಿನ ಇ.ಎಸ್.ವಾಸುದೇವ ಇಡ್ಯಾಡಿ ಅವರನ್ನು ಮಂಗಳೂರು ಕೋಟೆಕಾರಲ್ಲಿರುವ ಶೃಂಗೇರಿ ಮಠದಲ್ಲಿ ಸನ್ಮಾನಿಸಲಾಯಿತು.ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಯವರು ಆಶೀರ್ವದಿಸಿದರು.ಶೃಂಗೇರಿ ಮಠದ ಧರ್ಮದರ್ಶಿ ಸತ್ಯಶಂಕರ ಬೊಳ್ಳಾವ ಅವರು ಸನ್ಮಾನಿಸಿದರು.

ಧರ್ಮದರ್ಶಿ ಮಧುಸೂದನ ಅಯ್ಯರ್, ಮಠದ ಮ್ಯಾನೇಜರ್ ನಿರಂಜನ ಅವರು ಉಪಸ್ಥಿತರಿದ್ದರು.ಇತ್ತೀಚೆಗೆ ಮಂಗಳೂರು ಶ್ರೀನಿವಾಸ ವಿವಿ ಗ್ರೂಪ್ ಆಫ್ ಕಾಲೇಜುಗಳ ಸಂಸ್ಥಾಪಕರ ದಿನಾಚರಣೆ ಸಂದರ್ಭದಲ್ಲಿ ವಾಸುದೇವ ಇಡ್ಯಾಡಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

LEAVE A REPLY

Please enter your comment!
Please enter your name here