ಒಡ್ಯ ಕೇಂದ್ರದ ನಿವೃತ್ತ ಕಾರ್ಯಕರ್ತೆ ಶೀಲಾವತಿ ಅವರಿಗೆ ಬೀಳ್ಕೊಡುಗೆ

0

ಪುತ್ತೂರು: ಒಡ್ಯ ಕೇಂದ್ರದ ನಿವೃತ್ತ ಕಾರ್ಯಕರ್ತೆಯಾದ ಶೀಲಾವತಿ ಇವರ ಬೀಳ್ಕೊಡುಗೆ ಕಾರ್ಯಕ್ರಮವು ಒಡ್ಯ ಅಂಗನವಾಡಿ ಕೇಂದ್ರದಲ್ಲಿ ಮಾ.14ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಸರಸ್ವತಿ ಅವರು ವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಗುರುಗಳಾದ ನಾಮದೇವ ಶರ್ಮಾ, ಚಿನ್ಮಯ ಕೇಶವ ಭಟ್‌ ಕಾಕೆಕೊಚ್ಚಿ ಇಲಾಖೆಯಿಂದ ಮೇಲ್ವೀಚಾರಕಿ ನಾಗರತ್ನ, ದೂಜ ಡಿʼಸೋಜ, ಪ್ರಭಾರ ಕಾರ್ಯಕರ್ತೆ ಉಪಸ್ಥಿತದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ಶೀಲಾವತಿ ಅವರ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿ ಬಳಿಕ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಯಶೋಧ ನಿರ್ವಹಿಸಿ, ಲಲಿತ ಸ್ವಾಗತಿಸಿದರು. ಲೀಲಾವತಿ ಧನ್ಯವಾದ ನೆರವೇರಿಸಿದರು.

LEAVE A REPLY

Please enter your comment!
Please enter your name here