ಕೇಪುಳು ಸಪ್ತಗಿರಿ ನಗರದಲ್ಲಿ ಇಂಟರ್‌ಲಾಕ್ ರಸ್ತೆ ಉದ್ಘಾಟನೆ

0

ಪುತ್ತೂರು: ನಗರೋತ್ಥಾನ ಯೋಜನೆಯಡಿ ಮಂಜೂರಾದ ಅನುದಾನದಲ್ಲಿ ಕೇಪುಳು ಸಪ್ತಗಿರಿ ನಗರದಲ್ಲಿ ನಡೆದ ಇಂಟರ್‌ಲಾಕ್ ರಸ್ತೆಯನ್ನು ಮಾ.16ರಂದು ಉದ್ಘಾಟಿಸಲಾಯಿತು.
ಪರಿಸರದ ಸ್ಥಳೀಯರಾದ ಶಿವರಾಮ ಹೆಬ್ಬಾರ್ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ರಸ್ತೆಯನ್ನು ಉದ್ಘಾಟಿಸಿದರು. ಈ ಸಂದರ್ಭ ನಗರಸಭೆ ಸ್ಥಳೀಯ ಸದಸ್ಯ ಮೋಹಿನಿ ವಿಶ್ವನಾಥ ಗೌಡ, ಗೌರ ಬನ್ನೂರು, ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶ ಯುವರಾಜ್, ಗೋಪಾಲಕೃಷ್ಣ, ರಾಮಚಂದ್ರ, ಸುಮಿತ್ರೆ, ಪ್ರಸನ್ನ, ಹುಸೈನಾರ್, ಅಕ್ರಂ, ಇಸಾಕ್, ಜಯರಾಮ, ಸುಬಾನ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here