ನಿಡ್ಪಳ್ಳಿ; ಮುಂಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ ತರಬೇತಿ ಕಾರ್ಯಾಗಾರ- ಲ್ಯಾಪ್‌ಟಾಪ್ ಹಸ್ತಾಂತರ

0

ನಿಡ್ಪಳ್ಳಿ; ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು- 1 ಇಲ್ಲಿ 2ನೆ ಹಂತದ ಎಸ್. ಡಿ . ಎಂ.ಸಿ ತರಬೇತಿ ಕಾರ್ಯಾಗಾರವು ಎಸ್. ಡಿ. ಎಂ. ಸಿ ಅಧ್ಯಕ್ಷ  ಭಾಸ್ಕರ ಕರ್ಕೇರ ಇವರ ಅಧ್ಯಕ್ಷತೆಯಲ್ಲಿ ಮಾ.15 ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಶಿವ ಕುಮಾರ್ ಪೋಷಕರಿಗೆ ಮೌಲ್ಯಯುತವಾದ ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯ ಗುರು ಆಶಾ. ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾನಿಗಳು  ವಿದ್ಯಾರ್ಥಿಗಳ ಕಲಿಕೆಗಾಗಿ  ಉಚಿತವಾಗಿ ನೀಡಿರುವ ಎರಡು ಲ್ಯಾಪ್ ಟಾಪ್ ಗಳನ್ನು ಸಂಪನ್ಮೂಲ ವ್ಯಕ್ತಿ ಶಿವ ಕುಮಾರ್ ಶಾಲೆಗೆ ಹಸ್ತಾಂತರಿಸಿದರು. ಶಾಲಾ ಸಹ ಶಿಕ್ಷಕಿಯರಾದಸಾವಿತ್ರಿ ಸ್ವಾಗತಿಸಿ , ಸೌಮ್ಯ ವಂದಿಸಿದರು.ಚಿತ್ರಲೇಖ ,ರಶ್ಮಿತ ಮತ್ತು ರೇಷ್ಮಾ ಸಹಕರಿಸಿದರು.

LEAVE A REPLY

Please enter your comment!
Please enter your name here