ಪುಣಚ ಹಿಂದೂ ರುದ್ರಭೂಮಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ರೂ. 2,50,000 ಮಂಜೂರಾತಿ ಪತ್ರ ಹಸ್ತಾಂತರ

0

ಪುಣಚ: ಪುಣಚ ಹಿಂದೂ ರುದ್ರ ಭೂಮಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ರೂ.2,50,000ದ ಮಂಜೂರಾತಿ ಪತ್ರವನ್ನು ಅಳಿಕೆ ವಲಯಾಧ್ಯಕ್ಷ ರಾಜೇಂದ್ರ ರೈ ಹಾಗೂ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ, ಪುಣಚ ಹಿಂದೂ ರುದ್ರ ಭೂಮಿಯ ಕಾರ್ಯದರ್ಶಿ ಗುರುವಪ್ಪ ಪೂಜಾರಿಯವರಿಗೆ ಮಾ.19ರಂದು ಹಸ್ತಾಂತರಿಸಿದರು.

ಈ ಸಂದರ್ಭ ಪರಿಯಾಲ್ತಡ್ಕ ಒಕ್ಕೂಟದ ಅಧ್ಯಕ್ಷ ಶಿವಪ್ಪ‌, ಪುಣಚ ಒಕ್ಕೂಟದ ಪದಾಧಿಕಾರಿ ಲೀಲಾವತಿ, ಪುಣಚ ಗ್ರಾ.ಪಂ ಅಧ್ಯಕ್ಷೆ ಬೇಬಿ ಪಟಿಕಲ್ಲು, ಅಳಿಕೆ ವಲಯ ಮೇಲ್ವೀಚಾರಕಿ ಮಾಲತಿ, ಪುಣಚ ಒಕ್ಕೂಟದ ಸೇವಾ ಪ್ರತಿನಿಧಿ ಕಾವ್ಯ, ಸರಿತಾ, ಪರಿಯಾಲ್ತಡ್ಕ ಒಕ್ಕೂಟದ ಸೇವಾ ಪ್ರತಿನಿಧಿ ವಿನಯ, ಸಂತೋಷ್ ಕುಮಾರ್ ಕಲ್ಲಾಜೆ, ಕೀರ್ತೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here