ಸುಳ್ಯಕ್ಕೆ ಭೇಟಿ ನೀಡಿದ ಕ್ಯಾ. ಬ್ರಿಜೇಶ್ ಚೌಟ

0

ಪುತ್ತೂರು: ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಅಭಿಯಾನ ಆರಂಭಿಸಿದ್ದಾರೆ.ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಅಭಿಯಾನ ಆರಂಭಿಸಿದ್ದಾರೆ. ದೇವಾಲಯದ ಅನುವಂಶಿಕ ಮೊಕ್ತೆಸರ ಡಾ. ಹರಪ್ರಸಾದ್ ತುದಿಯಡ್ಕ ಶಾಲು ಹಾಕಿ ಪ್ರಸಾದ ನೀಡಿ ಗೌರವಿಸಿದರು.ದೇವಸ್ಥಾನ ಭೇಟಿ ಬಳಿಕ ಬ್ರಿಜೇಶ್ ಚೌಟ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಕೆವಿಜಿ ಪುತ್ಥಳಿಗೆ ಹಾರಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕಿ ಕು. ಭಾಗಿರಥೀ ಮುರುಳ್ಯ, ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ,ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಹರೀಶ್ ಕಂಜಿಪಿಲಿ,ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್,ಎನ್ . ಮನ್ಮಥ , ಪ್ರಮುಖರಾದ ರವೀಂದ್ರ ಶೆಟ್ಟಿ , ಅಪ್ಪಯ್ಯ ಮಣಿಯಾಣಿ, ಯತೀಶ್ ಆರ್‍ವಾರ , ತೇಜಸ್ವಿನಿ ಕಟ್ಟಪುಣಿ, ವಿನಯ್ ಕುಮಾರ್ ಕಂದಡ್ಕ, ವೆಂಕಟ್ ದಂಬೆಕೋಡಿ, ಚಂದ್ರ ಕೋಲ್ಚಾರ್ , ಸುಭೋದ್ ಶೆಟ್ಟಿ ಮೇನಾಲ, ವಿನಯ್‌ ಮುಳುಗಾಡು, ಹರೀಶ್ ಉಬರಡ್ಕ , ಅಶೋಕ್ ಅಡ್ಕಾರು, ಶ್ರೀಕೃಷ್ಣ ಕಡಬ, ಸುನೀಲ್ ಕೇರ್ಪಳ, ಸುಪ್ರೀತ್ ಮೊಂಟಡ್ಕ, ಲತೀಶ್ ಗುಂಡ್ಯ, ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here