ಎ.3-4: ಪಾಲ್ತಾಡಿ ಇಲ್ಲಾರೆಗುಡ್ಡೆ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಗರಡಿ ಪ್ರವೇಶೋತ್ಸವ,ಪುನಃ ಪ್ರತಿಷ್ಠಾ ಕಲಶಾಭಿಷೇಕ- ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಪಾಲ್ತಾಡಿ ಗ್ರಾಮದ ಇಲ್ಲಾರೆಗುಡ್ಡೆ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಪರಿವಾರ ದೈವಗಳ ನೂತನ ಗರಡಿ ಪ್ರವೇಶೋತ್ಸವ ಹಾಗೂ ಶ್ರೀ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಎ.3 ಮತ್ತು 4 ರಂದು ಪುರೋಹಿತರಾದ ಗಣೇಶ್ ಭಟ್ ಮಾಡಾವುರವರ ನೇತೃತ್ವದಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಇತ್ತೀಚೆಗೆ ಪಾಲ್ತಾಡಿ ಉಳ್ಳಾಕುಲು ಮಾಡದ ಬಳಿಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ರಘುನಾಥ ರೈ ನಡುಕೂಟೇಲು, ಕಿಟ್ಟಣ್ಣ ರೈ ನಡುಕೂಟೇಲು, ಸಮಿತಿಯ ಗೌರವ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು, ಸಂಜೀವ ಗೌಡ ಪಾರ್ಲ, ಪುರುಷೋತ್ತಮ ಗೌಡ ಅಂಗಡಿಹಿತ್ಲು, ವಿದಿತ್ ಗೌಡ ಅಂಗಡಿಹಿತ್ಲು, ಶರತ್ ರೈ ನಡುಕೂಟೇಲು, ಸುಕೇಶ್ ಗೌಡ ಪಾಲ್ತಾಡಿ, ಪಂಚಾಯತ್ ಸದಸ್ಯ ತಾರಾನಾಥ ಬೊಳಿಯಾಲ, ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇಲ್ಲಾರೆಗುಡ್ಡೆ ಇದರ ಕಾಪಾಡ ಚೋಮ ಬೇರಿಕೆ, ಸಮಿತಿಯ ಅಧ್ಯಕ್ಷ ಬಾಬು ಬಿ.ಕೆ ಬೇರಿಕೆ, ಪ್ರಧಾನ ಕಾರ್ಯದರ್ಶಿ ಆನಂದ ನಿಲಾವು, ಜತೆ ಕಾರ್ಯದರ್ಶಿ ಸುಂದರ ಪಾದೆಮೇಲು, ಕೋಶಾಧಿಕಾರಿ ರಮೇಶ್ ನಿಲಾವು, ಜತೆ ಕೋಶಾಧಿಕಾರಿ ದಿನೇಶ್ ಬೇರಿಕೆ, ಸಹರ್ಶ್ ಬೇರಿಕೆ, ಸದಸ್ಯರಾದ ಪೂವಪ್ಪ ಬೇರಿಕೆ, ಭಾಸ್ಕರ ಕಂದ್ರಪ್ಪಾಡಿ,ನಿಶಾಂತ್ ಕಂದ್ರಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಎ.4 ಗರಡಿ ಪ್ರವೇಶೋತ್ಸವ, ಪ್ರತಿಷ್ಠೆ
ಎ.3ರಂದು ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿದ್ದು ಎ.4 ರಂದು ಬೆಳಿಗ್ಗೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆದು ಬೆಳಿಗ್ಗೆ 10.30ಕ್ಕೆ ದೈವಗಳ ಪ್ರತಿಷ್ಠೆ ಬಳಿಕ ಕಲಶಾಭಿಷೇಕ, ತಂಬಿಲ ಸೇವೆ ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here