ಅರಿಯಡ್ಕ: ಮರದಿಂದ ಬಿದ್ದು ಮೃತ್ಯು

0

ಅರಿಯಡ್ಕ: ಅರಿಯಡ್ಕ ಗ್ರಾಮದ ದಿವಂಗತ ಅಣ್ಣಯ್ಯ ನಾಯ್ಕರ ಮಗ ಬಪ್ಪಮುಂಡೇಲ್ ನಿವಾಸಿ ಕೃಷ್ಣಪ್ಪ (55 ವ) ಎಂಬವರು ಕಳೆದ ವಾರ ಮನೆಯ ಹತ್ತಿರದ ತೋಟದ ಕೃಷಿಗೆ ಗೆಲ್ಲು ಕಡಿಯುವ ಸಂದರ್ಭದಲ್ಲಿ ಮರದಿಂದ ಬಿದ್ದು ಗಾಯವಾಗಿದ್ದು ಪುತ್ತೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮಾ.23ರಂದು ನಿಧನರಾಗಿದ್ದಾರೆ. ಇವರು ಮರದ ಕೆಲಸ ಮತ್ತು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here