ಪುತ್ತೂರು ಜಾತ್ರಾ ಗದ್ದೆಗೆ ತಾತ್ಕಾಲಿಕ ಏಲಂ ಪ್ರಕ್ರಿಯೆ

0

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10 ರಿಂದ 20 ರ ತನಕ ನಡೆಯುವ ಶ್ರೀ ದೇವರ ಜಾತ್ರೋತ್ಸವದ ಸಲುವಾಗಿ ದೇವಳದ ಎದುರು ಭಾಗದಲ್ಲಿ ಅಂಗಡಿ ವ್ಯಾಪಾರಗಳಿಗೆ ಗುರುತಿಸಿದ ಸ್ಥಳಗಳನ್ನು ತಾತ್ಕಾಲಿಕ ಏಲಂ ಪ್ರಕ್ರಿಯೆ ಮಾ.26 ರಂದು ದೇವಳದ ಸಭಾಭವನದಲ್ಲಿ ನಡೆಸಲಾಯಿತು.

ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ ಅವರ ನೇತೃತ್ವದಲ್ಲಿ ಏಲಂ‌ ಪ್ರಕ್ರಿಯೆ ನಡೆಯಿತು. ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಗದ್ದೆಯಲ್ಲಿ ಗುರುತಿಸಿದ ಪಟ್ಟಿಯ ಮಾಹಿತಿ ನೀಡಿದರು. ಗಿರೀಶ್ ಏಲಂ ಕೂಗಿದರು. ಪಂಜಿಗುಡ್ಡೆ ಈಶ್ವರ ಭಟ್, ದಿನೇಶ್ ಪಿ ವಿ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಳದ ಸಿಬ್ಬಂದಿಗಳು ಏಲಂ ಗಳ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here