ಚುನಾವಣಾ ಸಿಬ್ಬಂದಿಗಳಿಗೆ ಆಹಾರ ಪೂರೈಕೆ ಟೆಂಡರ್ ರದ್ದು

0

ಪುತ್ತೂರು: ಲೋಕಸಭಾ ಚುನಾವಣಾ ಸಿಬ್ಬಂದಿಗಳಿಗೆ ಆಹಾರ ಪೂರೈಕೆಗೆ ಸಂಬಂಧಿಸಿದಂತೆ ಕರೆಯಲಾದ ಟೆಂಡರ್ ತಕರಾರಿನ ಹಿನ್ನೆಲೆಯಲ್ಲಿ ರದ್ದುಗೊಂಡಿದೆ.

ಲೋಕಸಭಾ ಚುನಾವಣೆ – ೨೦೨೪ ಕ್ಕೆ ಸಂಬಂಧಿಸಿದಂತೆ, ಚುನಾವಣಾ ಸಿಬ್ಬಂದಿಗಳಿಗೆ ಆಹಾರ ಸರಬರಾಜು ಸಂಬಂಧ ಮಾ.೧೮ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಟೆಂಡರ್ ಪ್ರಕಟಣೆಗೊಳಿಸಲಾಗಿತ್ತು. ಎರಡು ಬಿಡ್ಡುದಾರರಿಂದ ಅರ್ಜಿಗಳು ಬಂದಿದ್ದು ಪರಿಶೀಲನೆ ವೇಳೆ ಬಿಡ್ಡುದಾರರ ಮಧ್ಯೆ ಉಂಟಾದ ತಕರಾರು ಪ್ರಕರಣದಿಂದಾಗಿ ಸದರಿ ಟೆಂಡರ್ ಪ್ರಕ್ರಿಯೆಯನ್ನು ರದ್ದು ಪಡಿಸಲಾಗಿದೆ ಎಂದು ತಹಶಿಲ್ದಾರರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here