ಮಾ.31:ಮಹಾಬಲ-ಲಲಿತ ಕಲಾ ಸಭಾದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

0

ಪುತ್ತೂರು: ಮಹಾಬಲ-ಲಲಿತ ಕಲಾ ಸಭಾದ ಆಶ್ರಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮಾ.31ರಂದು ಸಂಜೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜರಗಲಿದೆ.
ಕಾರ್ಯಕ್ರಮದಲ್ಲಿ ದ್ವಂದ್ವಗಾಯನವನ್ನು ವಿದ್ವಾನ್ ಆದಿತ್ಯನಾರಾಯಣ್ ಚೆನ್ನೈ ಹಾಗೂ ವಿದ್ವಾನ್ ಆದಿತ್ಯಮಾಧವನ್ ಚೆನ್ನೈರವರು ನಡೆಸಿಕೊಡುವರು. ವಯೊಲಿನ್ ನಲ್ಲಿ ವಿದ್ವಾನ್ ಬಿ.ಕೆ ರಘು ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಎಚ್.ಎಸ್ ಸುಧೀಂದ್ರ ಬೆಂಗಳೂರು, ಘಟದಲ್ಲಿ ವಿದ್ವಾನ್ ಶೀನು ಗೋಪಿನಾಥ್ ಕೊಟ್ಟಾಯಂರವರು ಸಹಕರಿಸಲಿದ್ದಾರೆ. ಸಂಗೀತಾಭಿಮಾನಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಕಲೆಯನ್ನು ಪ್ರೋತ್ಸಾಹಿಸಬೇಕಾಗಿ ಮಹಾಬಲ-ಲಲಿತ ಕಲಾ ಸಭಾದ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಸಮಯ..
-ಸಮಯ: ಸಂಜೆ 5.30 ರಿಂದ 9 ಗಂಟೆವರೆಗೆ.
-ಹೆಚ್ಚಿನ ಮಾಹಿತಿಗೆ ಡಾ.ಶ್ರೀಪ್ರಕಾಶ್ ಬಿ. 9448152893 ನಂಬರಿಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here