ಮಾ.30: ಕೆಮ್ಮಾಯಿ ಕೃಷ್ಣನಗರ ಶಾಲಾ ಸಹಶಿಕ್ಷಕಿ ಸಾವಿತ್ರಿ ಎನ್.ಸೇವಾ ನಿವೃತ್ತಿ

0

ಪುತ್ತೂರು: ಕೆಮ್ಮಾಯಿ ಕೃಷ್ಣನಗರ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸಾವಿತ್ರಿ ಎನ್.ರವರು ಮಾ.30 ರಂದು ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ 26 ವರ್ಷ 3 ತಿಂಗಳು ಸೇವೆ ಸಲ್ಲಿಸಿದ ಇವರು 1997 ರಲ್ಲಿ ಕೆದಂಬಾಡಿ ಸರಕಾರಿ ಶಾಲೆಗೆ ಸಹ ಶಿಕ್ಷಕಿಯಾಗಿ ಸೇರ್ಪಡೆಗೊಂಡು ಅಲ್ಲಿಂದ 2009 ರಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಂಟ್ಯಾರು ಇಲ್ಲಿಗೆ ವರ್ಗಾವಣೆಗೊಂಡು ಇಲ್ಲಿ ಸುಮಾರು 13 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಹೆಚ್ಚುವರಿ ವರ್ಗಾವಣೆಗೊಂಡು ಕೆಮ್ಮಾಯಿ ಕೃಷ್ಣನಗರ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಾ.30 ರಂದು ನಿವೃತ್ತಿಗೊಳ್ಳುತ್ತಿದ್ದಾರೆ. ಇವರು ದಿ.ರಾಘವ ಎಸ್.ರವರ ಪತ್ನಿಯಾಗಿದ್ದು ಪುತ್ರಿ ವಿಜಿತಾ ಬಿ ಮತ್ತು ಪುತ್ರ ವಿನೀತ್ ಬಿ.ರವರೊಂದಿಗೆ ಮುಕ್ವೆ ಮಣಿಯಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here