ನೆಲ್ಲಿಕಟ್ಟೆ ವೇಣುಗೋಪಾಲ್ ಶೆಟ್ಟಿ ನಿಧನ

0

ಪುತ್ತೂರು: ಮೂಲತಃ ನೆಲ್ಲಿಕಟ್ಟೆ ನಿವಾಸಿಯಾಗಿದ್ದ ದಿ. ಜನಾರ್ದನ್ ಶೆಟ್ಟಿ ಯವರ ಹಿರಿಯ ಪುತ್ರ, ವೇಣುಗೋಪಾಲ್ ಶೆಟ್ಟಿ (53) ಬಹರೈನ್ ನಲ್ಲಿ ಮಾ.29ರಂದು ಬೆಳಗ್ಗೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಪುತ್ತೂರಿನಲ್ಲಿ 2000ನೇ ಇಸವಿಯಲ್ಲಿ ಸೈಬರ್ ಸಿಟಿ, NIIT ಮೊದಲಾದ ಕಂಪ್ಯೂಟರ್ ಸಂಸ್ಥೆಗಳ ಪಾಲುದಾರರಾಗಿದ್ದ ಇವರು ಹಲವು ವರ್ಷಗಳಿಂದ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದರು.

ಮೃತರು ಸಹೋದರರಾದ ನೆಲ್ಲಿಕಟ್ಟೆ ನಿವಾಸಿ ದೀಪಕ್ ಶೆಟ್ಟಿ , ಅಬುದಾಬಿಯಲ್ಲಿ ಉದ್ಯೋಗದಲ್ಲಿರುವ ವಿನೋದ್ ಶೆಟ್ಟಿ ಹಾಗೂ ಪತ್ನಿ ,ತಂಗಿ ಮತ್ತು ತಾಯಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here