ನೆಲ್ಯಾಡಿ ಉಪ ಅಂಚೆಕಚೇರಿ ಅಂಚೆಪಾಲಕ ರಾಮಣ್ಣ ಶೆಟ್ಟಿಯವರಿಗೆ ಬೀಳ್ಕೊಡುಗೆ

0

ನೆಲ್ಯಾಡಿ: ಅಂಚೆ ಇಲಾಖೆಯಲ್ಲಿ 41ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ನೆಲ್ಯಾಡಿ ಉಪ ಅಂಚೆ ಕಚೇರಿಯಲ್ಲಿ ಅಂಚೆಪಾಲಕರಾಗಿದ್ದು ಮಾ.31ರಂದು ನಿವೃತ್ತರಾದ ಡಿ.ರಾಮಣ್ಣ ಶೆಟ್ಟಿಯವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾಮಂದಿರದಲ್ಲಿ ನಡೆಯಿತು.


ಸಹಾಯಕ ಅಂಚೆ ಅಧೀಕ್ಷಕ ಮೋಹನ್ ಬಿ.ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿ.ರಾಮಣ್ಣ ಶೆಟ್ಟಿ ಹಾಗೂ ನಳಿನಿ ಆರ್.ಶೆಟ್ಟಿ ದಂಪತಿಯನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಅತಿಥಿಗಳಾಗಿದ್ದ ಸಹಾಯಕ ಅಂಚೆ ಅಧೀಕ್ಷಕರಾದ ಚಂದ್ರನಾಯ್ಕ, ಅಂಚೆ ಮೇಲ್ವಿಚಾರಕ ಧನಂಜಯ ಬಿ ಅವರು ಶುಭಹಾರೈಸಿದರು. ಸಿಬ್ಬಂದಿಗಳಾದ ಹರೀಶ ಶಿವಾಯಗೋಳ, ಯಶಸ್ವಿನಿ, ಚಿದಂಬರ, ಸುಂದರ ಶೆಟ್ಟಿ ಹಾಗೂ ವಿಮಲಾ ಅವರು ಅನಿಸಿಕೆ ವ್ಯಕ್ತಪಡಿಸಿ ಡಿ.ರಾಮಣ್ಣ ಶೆಟ್ಟಿಯವರಿಗೆ ಶುಭಹಾರೈಸಿದರು. ಡಿ.ರಾಮಣ್ಣ ಶೆಟ್ಟಿಯವರು ಮಾತನಾಡಿ, ಸೇವಾ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಅಂಚೆ ಸಹಾಯಕ ಜನಾರ್ದನ ಸ್ವಾಗತಿಸಿದರು. ಸ್ವಾತಿ ಯಂ.ಡಿ.ವಂದಿಸಿದರು. ರಕ್ಷಾ ಡಿ.ಅಂಚನ್ ನಿರೂಪಿಸಿದರು. ಅಂಚೆ ಇಲಾಖೆಯ ನಿವೃತ್ತ ಸಿಬ್ಬಂದಿಗಳಾದ ಡೊಂಬಯ್ಯ ಗೌಡ, ಪದ್ಮಯ್ಯ ಗೌಡ, ಗುಮ್ಮಣ್ಣ ಹೆಗ್ಡೆ, ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here