ಮನವಳಿಕೆ ಗುಂಡಾಲಗುತ್ತು ಪುಷ್ಪಾ ಜಿ ರೈ ಶ್ರದ್ಧಾಂಜಲಿ ಕಾರ್ಯಕ್ರಮ

0

ಆಲಂಕಾರು: ಪೆರಾಬೆ ಗ್ರಾಮದ ಮನವಳಿಕೆಗುತ್ತು ಗೋಪಾಲಕೃಷ್ಣ ರೈಯವರ ಪತ್ನಿ ಗುಂಡಾಲಗುತ್ತು ಪುಷ್ಪಾ.ಜಿ.ರೈ ಯವರು ಮಾ.19ರಂದು ನಿಧನರಾಗಿದ್ದು ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗು ನುಡಿನಮನ ಕಾರ್ಯಕ್ರಮ ಉಪ್ಪಿನಂಗಡಿ ನೇತ್ರಾವತಿ ಸಭಾಭವನದಲ್ಲಿ ಮಾ.31ರಂದು ನಡೆಯಿತು. ಬಂಟ್ವಾಳದ ವಕೀಲರಾದ ಸೋಹನ್ ಅಳ್ವರವರು ಪುಷ್ಪಾ ಜಿ.ರೈ ಯವರ ಬಗ್ಗೆ ನುಡಿನಮನ ಸಲ್ಲಿಸಿ ಮನುಷ್ಯನ ಹುಟ್ಟು ಅಕಸ್ಮಿಕ ಸಾವು ನಿಶ್ಚಿತ ಹುಟ್ಟು ಮತ್ತು ಸಾವಿನ ನಡುವೆ ಬಾಳ್ವೆ ನಡೆಸುವಂತದ್ದೇ ಜೀವನ ಪುಷ್ಪಾ ಜಿ.ರೈ ಯವರು ಜೀವನದಲ್ಲಿ ಎಲ್ಲರೊಂದಿಗೆ ಅನ್ಯೋನ್ಯತೆ ಯಿಂದ ಇದ್ದು ಎಲ್ಲಾರ ಪ್ರೀತಿ ವಿಶ್ವಾಸಗಳನ್ನು ಗಳಿಸಿದವರು.ಅಗಲಿದ ಜೀವಕ್ಕೆ ಭಗವಂತ ಚಿರ ಶಾಂತಿ ಯನ್ನು ಕರುಣಿಸಲೆಂದು ಪ್ರಾರ್ಥಿಸಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ವೇದಿಕೆಯಲ್ಲಿ ಪುಷ್ಪಾ ಜಿ.ರೈಯವರ ಪತಿ ಗೋಪಾಲಕೃಷ್ಣ ರೈ,ಸಹೋದರಿಯರಾದ ಗೀತಾ ರೈ, ಸುಲೋಚನಾ ರೈ, ಸರಸ್ವತಿ ಶೆಟ್ಟಿ ಮಗ ಅಭಿಜಿತ್ ರೈ.ಯಂ, ಸೊಸೆ ಸುಶ್ಮೀತಾ.ಬಿ.ರೈ ಹಾಗು ಕುಟುಂಬಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮನವಳಿಕೆಗುತ್ತು ಹಾಗು ಗುಂಡಾಲಗುತ್ತುವಿನ ಕುಟುಂಬಸ್ಥರು ಹಾಗು ಹಿತೈಷಿಗಳು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪಾ ಜಿ.ರೈ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here