ಉದ್ಯಮಿ ಕೋಡಂಬು ಶಿವರಾಮ ರೈಯವರಿಂದ ತೆಗ್ಗು ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ಮಲ್ಲಿಗೆ ಸೇವೆ

0

ಪುತ್ತೂರು: ಭಕ್ತಿಯಿಂದ ನಂಬಿದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಕೆಯ್ಯೂರು ಗ್ರಾಮದ ತೆಗ್ಗು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ನೆಲೆಯಾಗಿರುವ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.30 ಜರಗಿದ್ದು ಈ ಸಂದರ್ಭದಲ್ಲಿ ಪುಣೆಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ಕೋಡಂಬು ಶಿವರಾಮ ರೈಯವರು ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ಸುಮಾರು 48 ಚೆಂಡು ಮಲ್ಲಿಗೆಯನ್ನು ಸೇವೆಯಾಗಿ ಅರ್ಪಿಸಿದರು.

ಇದಲ್ಲದೆ ಇವರು ಸಾರ್ವಜನಿಕ ಅನ್ನಸಂತರ್ಪಣೆಗೆ 25 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಬಾಬು ಮಾಸ್ತರ್ ತೆಗ್ಗು ಮತ್ತು ಕುಟುಂಬಸ್ಥರು ಶಿವರಾಮ ರೈ ಕೋಡಂಬು ಕುಟುಂಬಕ್ಕೆ ಶ್ರೀ ದೈವದ ಗಂಧ ಪ್ರಸಾದ ನೀಡಿ ಸತ್ಕರಿಸಿದರು.

LEAVE A REPLY

Please enter your comment!
Please enter your name here