ಬೆಟ್ಟಂಪಾಡಿ: ಭಜನಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

0


ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ 42ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜರಗಿತು. ಗೌರವಾಧ್ಯಕ್ಷರಾಗಿ ಶಿವಕುಮಾರ್‌ ಬಲ್ಲಾಳ್‌ ಬೆಟ್ಟಂಪಾಡಿ ಬೀಡು ರವರು ಆಯ್ಕೆಯಾದರು. ಅಧ್ಯಕ್ಷರಾಗಿ ಪ್ರಮೋದ್‌ ರೈ ಬರೆ, ಕಾರ್ಯದರ್ಶಿಯಾಗಿ ಶುಶಾಂತ್‌ ಅಂಗರಾಜೆ, ಕೋಶಾಧಿಕಾರಿಯಾಗಿ ದಾಮೋದರ ಮಾಲಡ್ಕ, ಸಂಚಾಲಕರಾಗಿ ಸಂಜಯ್‌ ಬಲ್ಲಾಳ್‌ ಬೀಡು ರವರು ಆಯ್ಕೆಯಾದರು. ಈ ವೇಳೆ ಸಂಘದ ನಿಕಟಪೂರ್ವ ಅಧ್ಯಕ್ಷ ರಮೇಶ್‌ ಗೌಡ ಬಳ್ಳಿತ್ತಡ್ಡ ಮತ್ತು ಸದಸ್ಯರುಗಳು ಹಾಜರಿದ್ದರು.

LEAVE A REPLY

Please enter your comment!
Please enter your name here