ಟಾಕೀಸ್ ಆ್ಯಪ್‌ನಲ್ಲಿ ಕಲಹ ಕಿರುಚಿತ್ರ ಬಿಡುಗಡೆ

0

ಪುತ್ತೂರು: ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಬ್ಯಾನರ್ ನಡಿಯಲ್ಲಿ ಬರುತಿರುವಂತಹ ‘ಕಲಹ’ ಕಿರು ಚಿತ್ರ ಮಾ.31 ರಂದು ಉಪ್ಪಿನಂಗಡಿ ಕಂಬಳೋತ್ಸವದಲ್ಲಿ ಬಿಡುಗಡೆಗೊಂಡಿದೆ. ಬಿಡುಗಡೆ ಸಮಾರಂಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹಾಗೂ ಚಿತ್ರ ನಟ ಧನ್ವೀರ್ ಗೌಡ, ನಟಿ ಆರತಿ ಪಡುಬಿದ್ರಿ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು.

ಧನುಷ್ ನೆಕ್ಕಿಲಾರು ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದು, ಮನು ಎಂ.ಪಂಜ ನಿರ್ಮಾಣ, ಮಿಥುನ್ ರಾಜ್ ವಿದ್ಯಾಪುರ ಸಂಗೀತ ನೀಡಿದ್ದಾರೆ. ಚಿತ್ರವನ್ನು ಟಾಕೀಸ್ ಓಟಿಟಿ ಆ್ಯಪ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ ಎಂದು ಚಿತ್ರತಂಡದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here