ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ದುಗಲಾಯಿ ದೈವದ ನೇಮೋತ್ಸವ

0

ನೆಲ್ಯಾಡಿ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಎ.3ರಂದು ಶ್ರೀ ದುಗಲಾಯಿ ದೈವದ ನೇಮೋತ್ಸವ ನಡೆಯಿತು.
ದೇವರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಎ.3ರಂದು ಬೆಳಿಗ್ಗೆ ಸಂಪ್ರೋಕ್ಷಣೆ ನಡೆದ ಬಳಿಕ ಶ್ರೀ ದುಗಲಾಯಿ ದೈವದ ನೇಮೋತ್ಸವ ಆರಂಭಗೊಂಡಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಹಲವು ಗಣ್ಯರು ಭೇಟಿ ನೀಡಿದರು. ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ನೇಮೋತ್ಸವದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೇಮೋತ್ಸವ ಕಣ್ತುಂಬಿಕೊಂಡ ಫ್ರಾನ್ಸ್ ಪ್ರಜೆ:
ಎ.3ರಂದು ನಡೆದ ದುಗಲಾಯಿ ದೈವದ ನೇಮೋತ್ಸವದಲ್ಲಿ ಫ್ರಾನ್ಸ್ ಪ್ರಜೆ ಒಳಿವೇರ್ ಎಂಬವರು ಉಪಸ್ಥಿತರಿದ್ದು ನೇಮೋತ್ಸವವನ್ನು ಕಣ್ತುಂಬಿಸಿಕೊಂಡರು. ಇವರು ಸ್ನೇಹಿತ ಕೊಯಿಲ ಗ್ರಾಮದ ಗುಂಡಿಜೆ ನಿವಾಸಿ ಯತೀಶ್ ಅವರ ಜೊತೆ ಕೊಯಿಲಕ್ಕೆ ಆಗಮಿಸಿದ್ದರು. ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಹಾಗೂ ಸಮಿತಿ ಪದಾಧಿಕಾರಿಗಳು ಒಳಿವೇರ್ ಅವರನ್ನು ಗೌರವಿಸಿದರು. ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ದೇವರ ಪ್ರಸಾದ ನೀಡಿದರು.

LEAVE A REPLY

Please enter your comment!
Please enter your name here