ತೆಂಕಿಲ ಮುಕ್ತಾ ಶೆಟ್ಟಿ ರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇಲ್ಲಿನ ತೆಂಕಿಲ ದಯಾನಂದ ಶೆಟ್ಟಿಯವರ ಪತ್ನಿ ಮುಕ್ತಾ ಶೆಟ್ಟಿಯವರ ಶ್ರದ್ಧಾಂಜಲಿ ಸಭೆಯು ಎ.5ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯ ನೇತ್ರಾವತಿ ಸಭಾಭವನದಲ್ಲಿ ಜರಗಿತು.


ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತೆಂಕಿಲ ಕಟ್ಟತ್ತಾರು ಇದರ ಅಧ್ಯಕ್ಷರಾಗಿ ಗೌರವಾಧ್ಯಕ್ಷರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾಗಿದ್ದ ಇವರ ಉತ್ತರ ಕ್ರಿಯೆಯು ಇಂದು ನಡೆಯಿತು. ಮೃತರ ಆತ್ಮಸದ್ಗತಿಗಾಗಿ ವಿವಿಧ ಕಾರ್ಯಕ್ರಮಗಳು ನಡೆದು ನಂತರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ನಿವೃತ್ತ ಅಧ್ಯಾಪಕರಾದ ಸುರೇಶ್ ಶೆಟ್ಟಿಯವರು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪತಿ ದಯಾನಂದ ಶೆಟ್ಟಿ, ಮಕ್ಕಳಾದ ಸುಧೀರ್ ಶೆಟ್ಟಿ, ಮಮತಾ ಶೆಟ್ಟಿ, ಸೊಸೆಯಂದಿರಾದ ಶಮಿತಾ ಶೆಟ್ಟಿ, ಶೋಭಾ ಶೆಟ್ಟಿ,ಅಳಿಯ ವಿಶ್ವನಾಥ ಶೆಟ್ಟಿ, ಮೊಮ್ಮಕ್ಕಳಾದ ವಿನೀತ್ ಶೆಟ್ಟಿ, ಅಕ್ಷಿತ ಶೆಟ್ಟಿ, ವಿಶಾಂತ್ ಶೆಟ್ಟಿ, ಅದಿತಿ ಶೆಟ್ಟಿ, ವೀಕ್ಷಾ ಶೆಟ್ಟಿ, ವಿಕಾಸ್ ಶೆಟ್ಟಿ, ವಿಜ್ಞಾಶ್ ಶೆಟ್ಟಿ, ವಿಶೃತಿ ಶೆಟ್ಟಿ, ಮರಿಮಕ್ಕಳಾದ ವಿಯಾನ್ ಶೆಟ್ಟಿ, ವಿಶಿಕ ಶೆಟ್ಟಿ, ಕುಟುಂಬಸ್ಥರು ಹಾಗೂ ಬಂಧುಮಿತ್ರರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತಾ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here