ಗುಂಡ್ಯ:ಬಸ್-ಕಾರು ಡಿಕ್ಕಿ ಪ್ರಕರಣ-ಬಸ್ ಚಾಲಕನಿಗೆ ಶಿಕ್ಷೆ

0

ಪುತ್ತೂರು:2022ರ ಜುಲೈನಲ್ಲಿ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ಸೊಂದರ ಮಧ್ಯೆ ಅಪಘಾತ ಸಂಭವಿಸಿ ಕಾರಲ್ಲಿದ್ದವರು ಗಾಯಗೊಂಡಿದ್ದ ಪ್ರಕರಣದ ಆರೋಪಿಯಾಗಿರುವ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಮಂಗಳೂರುನಿಂದ ಸಕಲೇಶಪುರಕ್ಕೆ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿ ಬರುತ್ತಿದ್ದವರ ಕಾರು ಮತ್ತು ಬಸ್ಸಿನ ಮಧ್ಯೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಗುಂಡ್ಯ ಸಮೀಪ 2022ರ ಜುಲೈ 5ರಂದು ಸಂಜೆ ಅಪಘಾತ ಸಂಭವಿಸಿತ್ತು.ಪರಿಣಾಮ ಕಾರು ಚಾಲಕ ಇಕ್ಬಾಲ್ ಮಂಝಿಲ್ ಹಾಗೂ ಕಾರಲ್ಲಿದ್ದ ಮಹಮ್ಮದ್ ಫೈರಝ್, ಮಹಮ್ಮದ್ ಅತೀಫ್ ಅವರಿಗೆ ಗಾಯಗಳಾಗಿ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.ಘಟನೆ ಸಂಬಂಧ ಕಾರಲ್ಲಿದ್ದ ಉಮ್ಮರ್ ಮಖ್ತಿಯಾರ್ ಮಂಗಳೂರು ಎಂಬವರು ನೀಡಿದ್ದ ದೂರಿನಂತೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಆನಂದ್ ಕೆ.ಕಾಡುಮನೆ ಬಲ್ಯ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ನ್ಯಾಯಾಲಯ ಆರೋಪಿ ಬಸ್ ಚಾಲಕನಿಗೆ 36 ದಿನಗಳು ಕಾರಾಗೃಹ ವಾಸ ಅಥವಾ 3000 ರೂ.ದಂಡ.ಇವೆರಡರಲ್ಲಿ ಒಂದು ಬಗೆಯ ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.ಪ್ರಕರಣದಲ್ಲಿ ಆರೋಪಿ ವಿರುದ್ಧ ಹೆಡ್‌ಕಾನ್‌ಸ್ಟೇಬಲ್ ದೇನಿಕ ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.ಕಿರಿಯ ಸರ್ಕಾರಿ ಅಭಿಯೋಜಕಿಯಾದ ಶ್ರೀಮತಿ ಕವಿತಾರವರು ಸರ್ಕಾರದ ಪರ ವಾದಿಸಿದ್ದರು.

LEAVE A REPLY

Please enter your comment!
Please enter your name here