ಮಂದಾರ ಕ್ರಿಯೇಶನ್ ರವರ “ಪಲ್ಲತ್ತಡ್ಕದ ಸತ್ಯ” ಶ್ರೀ ಹೊಸಮ್ಮ ದೇವಿಯ ಭಕ್ತಿ ಗೀತೆಯ ಧ್ವನಿ ಸುರುಳಿ ಬಿಡುಗಡೆ

0

ಕೆಯ್ಯೂರು: ತುಳುನಾಡಿನ ಕಾನತ್ತೂರು ಎಂದೇ ಪ್ರಸಿದ್ದಿ ಪಡೆದ ಮಂದಾರ ಕ್ರಿಯೇಶನ್ ಅವರ ಶ್ರೀ ಪಲ್ಲತ್ತಡ್ಕ ಹೊಸಮ್ಮ ದೇವಿಯ ಪಲ್ಲತ್ತಡ್ಕದ ಸತ್ಯ ಭಕ್ತಿಗೀತೆಯ ಅಲ್ಬಂ ಬಿಡುಗಡೆಯು ಹೊಸಮ್ಮ ದೈವಸ್ಥಾನದ ವಠಾರದಲ್ಲಿ ಎ.5ರಂದು ಆಡಳಿತ ಮಂಡಳಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಬಿಡುಗಡೆಗೊಳಿಸಿದರು.

ದಾಮೋದರ ಸಂತೋಷ್ ನಗರ ನಿರ್ಮಾಣದ, ತುಳು ರಂಗ ಪ್ರೇಮಿ ರಂಜು ಸಂಗೀತ ನಿರ್ಮಾಣದಲ್ಲಿ, ಹರೀಶ್ ಮಂಜೋಟ್ಟಿ ಪೆರಾಜೆ ಸಾಹಿತ್ಯ ಮಾಡಿ, ಗಾಯಕರಾಗಿ ಗುಣಪಾಲ್ ಎಂ.ಎಸ್, ಚೇತನಾ ಗುಣಪಾಲ್ ಹಾಡಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಅನುವಂಶಿಕ ಮುಖ್ಯಸ್ಥೆ ರಾಜೀವಿ ಪಲ್ಲತ್ತಡ್ಕ, ‌ಕುಟುಂಬಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here