ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ದೋಳ್ಪಾಡಿ ಶೀನ ಪರವರ ಮನೆಯಲ್ಲಿ ದೈವಗಳ ನೇಮೊತ್ಸವ-ಒಡಿಯೂರು ಶ್ರೀಯವರಿಂದ ಆಶೀರ್ವಚನ

0

ಕಾಣಿಯೂರು: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ದೋಳ್ಪಾಡಿ ಶೀನ ಪರವರವರ ಮನೆಯಲ್ಲಿ ಧರ್ಮದೈವ ಅಣ್ಣಪ್ಪ ಪಂಜುರ್ಲಿ, ಸತ್ಯದೇವತೆ ಮತ್ತು ಗುಳಿಗ ದೈವಗಳ ನೇಮೊತ್ಸವ ನಡೆಯಿತು. ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಉಪನ್ಯಾಸಕರಾಗಿರುವ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ದೈವ ನರ್ತಕ ಡಾ.ರವೀಶ್ ಪಡುಮಲೆ ಅವರನ್ನು ಸನ್ಮಾನಿಸಲಾಯಿತು.


ಧಾರ್ಮಿಕ ಸಭೆಯಲ್ಲಿ ರಾಮಕೃಷ್ಣ ರೈ ಮಲೆಂಗ್ರಿ, ಲಕ್ಷ್ಮಣ ಕರಂದ್ಲಾಜೆ, ಬಾಲಕೃಷ್ಣ ರೈ ಕಾಸ್ಪಾಡಿಗುತ್ತು ಮತ್ತು ಶೀನ ಪರವರು ಉಪಸ್ಥಿತರಿದ್ದರು. ಸುಳ್ಯ ಶಾಸಕರು ಭಾಗೀರಥಿ ಮುರುಳ್ಯ ಸಹಿತ
ಅನೇಕ ತರವಾಡುಗಳ ಮುಖ್ಯಸ್ಥರು ಭಾಗವಹಿಸಿದರು. ವಸಂತಿ ಮತ್ತು ಲೋಕಯ್ಯ ಪರವ ಮತ್ತು ಮಕ್ಕಳು ಸ್ವಾಗತಿಸಿದರು.

LEAVE A REPLY

Please enter your comment!
Please enter your name here