ಬೈಕ್ ಅಪಘಾತ-ಹಿಂಬದಿ ಸವಾರೆ ಮೃತ್ಯು ಪ್ರಕರಣ-ಆರೋಪಿ ಬೈಕ್ ಸವಾರ ದೋಷ ಮುಕ್ತ

0

ಪುತ್ತೂರು  ಐದು ವರ್ಷಗಳ ಹಿಂದೆ ಬೈಕೊಂದು ಅಪಘಾತಕ್ಕೀಡಾಗಿ ಹಿಂಬದಿ ಸವಾರೆ  ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಆರೋಪಿ ಬೈಕ್ ಸವಾರನನ್ನು ಪುತ್ತೂರು ನ್ಯಾಯಾಲಯವು ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ.

ದಿನಾಂಕ 7-3-2019ರಂದು ಕಡಬ ಸಮೀಪ ಘಟನೆ ನಡೆದಿತ್ತು. ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಹಿಂಬದಿಯ ಸವಾರೆ ಶ್ರೀಮತಿ ರಾಜೇಶ್ವರಿ ಎಂಬವರು  ಕೆಳಗಡೆಗೆ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಬೈಕ್ ಸವಾರ ಪ್ರಭಾಕರನ್ ಎಂಬವರ ಮೇಲೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ಆರೋಪಿ ಪ್ರಭಾಕರನನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿಯ ಪರವಾಗಿ ನ್ಯಾಯವಾದಿಗಳಾದ ಎಸ್ ಪ್ರವೀಣ್ ಕುಮಾರ್, ಸುಶ್ಮಿತಾ ವೈ. ಎಲ್. ಮತ್ತು ಅರ್ಚನಾ ಬಿ.ಸಿ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here