ಉಪ್ಪಿನಂಗಡಿ:ಕಾರಲ್ಲಿ ಬಂದವರಿಂದ ಚೂರಿಯಿರಿತ-ಕೊಲೆ ಯತ್ನ ಪ್ರಕರಣ ದಾಖಲು

0

ಉಪ್ಪಿನಂಗಡಿ:ಹುಡುಗಿಯೊಂದಿಗೆ ಮಾತನಾಡಿದ ವಿಚಾರದಲ್ಲಿ ಕಾರಲ್ಲಿ ಬಂದ ತಂಡವೊಂದು ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದು,ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಬಂಟ್ವಾಳ ಬಿಳಿಯೂರು ಗ್ರಾಮ ನಿವಾಸಿ ಅಬ್ದುಲ್ ಹಕೀಂ ಎಂಬವರು ಹಲ್ಲೆಗೊಳಗಾದವರಾಗಿದ್ದು ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಱಆರೋಪಿ ಬಿಳಿಯೂರು ಬಾನೊಟ್ಟು ನಿವಾಸಿ ಇಸಾಕ್ ಎಂಬಾತನು, ಆತನ ತಂಗಿಯೊಂದಿಗೆ ನಾನು ಫೋನ್ ಕರೆಮಾಡಿ ಮಾತನಾಡಿದ ವಿಚಾರದಲ್ಲಿ ತಕರಾರು ತೆಗೆದು, ನನಗೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೇ, ಏ.12ರಂದು ಬೆಳಗ್ಗೆ ನಾನು ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಕರ್ವೇಲುವಿನಲ್ಲಿರುವಾಗ, ಆರೋಪಿ ಇಸಾಕ್ ಮತ್ತು ಇತರ 3 ಜನರು ಕಾರಿನಲ್ಲಿ ಬಂದು ಗುದ್ದಿ ನಾನು ಕೆಳಗೆ ಬಿದ್ದ ವೇಳೆ ಹಲ್ಲೆ ನಡೆಸಿರುತ್ತಾರೆ.ಈ ಪೈಕಿ ಆರೋಪಿ ಇಸಾಕ್ ತಲವಾರಿನಿಂದ  ಹಲ್ಲೆ ನಡೆಸಿದ್ದು, ಆಶಿಕ್ ಎಂಬಾತನು ಆತನ ಕೈಯಲ್ಲಿದ್ದ ಚಾಕುವಿನಿಂದ ತಿವಿದಿರುತ್ತಾನೆ.ಇನ್ನಿತರ ಇಬ್ಬರು ಅರೋಪಿಗಳೂ ಹಲ್ಲೆ ನಡೆಸಿ ಕಾರಿನಲ್ಲಿ ಹೋಗಿರುತ್ತಾರೆೞ ಎಂದು ಅಬ್ದುಲ್ ಹಕೀಂ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.ಸದ್ರಿ ಹಲ್ಲೆಗೆ ಆರೋಪಿ ಅಶ್ರಫ್ ಎಂಬಾತನ ಕುಮ್ಮಕ್ಕಿನಿಂದ ಇಸಾಕ್, ಆಶಿಕ್ ಮತ್ತು ಇತರ ಇಬ್ಬರು ಕೊಲೆ ಮಾಡುವ ಉದ್ಧೇಶದಿಂದ ಹಲ್ಲೆ ಮಾಡಿರುವುದಾಗಿ ಅಬ್ದುಲ್ ಹಕೀಂ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here