ಕುವೆತ್ತಿಲ: ಸ್ಕೂಟರ್‌ ಗೆ ಕಾರು ಡಿಕ್ಕಿ- ದೂರು ದಾಖಲು

0

ವಿಟ್ಲ : ರಸ್ತೆಬದಿ ನಿಂತಿದ್ದ ಸ್ಕೂಟರ್‌ ಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಎ.12ರಂದು ಬಂಟ್ವಾಳ, ಇಡ್ಕಿದು ಗ್ರಾಮದ ಕುವೆತ್ತಿಲ ಎಂಬಲ್ಲಿ ನಡೆದಿದೆ.

KA-21-M-6961 ನೇ ನೋಂದಣಿ ನಂಬ್ರದ ಕಾರು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾಣಿ ಕಡೆಯಿಂದ ಪುತ್ತೂರು ಕಡೆ ಸಾಗುತ್ತಿದ್ದು, ಕಾರಿನ ಚಾಲಕ ವಿಶ್ವಜಿತ್‌ ಎಂಬವರು ಅಜಾಗರೂಕತೆ ಹಾಗೂ ದುಡುಕುತನದಿಂದ ಕಾರು ಚಲಾಯಿಸಿ, ಕುವೆತ್ತಿಲ ಎಂಬಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಕೂಟರ್‌ ಪಕ್ಕದಲ್ಲಿ ನಿಂತು ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದ ಸ್ಕೂಟರ್‌ ಸವಾರೆ ಮಂಜುಶ್ರೀ ಎಂಬವರು ಗಾಯಗೊಂಡಿದ್ದಾರೆ. ಗಾಯಗೊಂಡ ಮಂಜುಶ್ರೀ ಅವರನ್ನು ತಕ್ಷಣ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತಂತೆ ಮಂಜುಶ್ರೀ ವಿಟ್ಲ ಪೊಲೀಸ್ ಠಾಣೆಯಲ್ಲಿ, ಅ.ಕ್ರ 69/2024, ಕಲಂ: 279, 337 IPC ಯಂತೆ ದೂರು ದಾಖಲಿಸಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here