ಕೊಲ್ಲಿ ದೇವಳದಲ್ಲಿ ಧೀಶಕ್ತಿ ಯಕ್ಷಬಳಗದಿಂದ ತಾಳಮದ್ದಳೆ

0

ಪುತ್ತೂರು: ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಮಿತ್ತಬಾಗಿಲು ಇಲ್ಲಿನ ಬ್ರಹ್ಮಕಲಶೋತ್ಸವದ ಅಂಗವಾಗಿ ಧೀಶಕ್ತಿ ಮಹಿಳಾ ಯಕ್ಷಬಳಗ, ತೆಂಕಿಲ ಪುತ್ತೂರು ಇವರಿಂದ ತಾಳಮದ್ದಳೆ ಶ್ರೀರಾಮ ದರ್ಶನ (ಹಲಸಿನಹಳ್ಳಿ ನರಸಿಂಹ ಶಾಸ್ತ್ರೀ ವಿರಚಿತ) ನಡೆಯಿತು.

ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ,ಕು| ಸಿಂಚನಾ ಮೂಡುಕೋಡಿ, ಚೆಂಡೆಯಲ್ಲಿ ಜಿ. ಸುಬ್ರಹ್ಮಣ್ಯ ಭಟ್,ಮದ್ದಳೆಯಲ್ಲಿ ಶ್ರೇಯಸ್ ಪಾಲಂದೆ ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ, ಜಯಲಕ್ಷ್ಮಿ ವಿ ಭಟ್, ಶುಭಾ ಪಿ ಆಚಾರ್ಯ, ಹೀರಾ ಉದಯ್, ಪ್ರೇಮಾ ನೂರಿತ್ತಾಯ ಅರ್ಥದಾರಿಗಳಾಗಿ ಭಾಗವಹಿಸಿದರು. ಉಜ್ವಲ್ ತೇಜಸ್, ಹಳೇಬೀಡು ಕಾರ್ಯಕ್ರಮವನ್ನು ಪ್ರಾಯೋಜಿಸಿದರು. ಕೇಶವ ಫಡ್ಕೆಯವರು ಕಾರ್ಯಕ್ರಮ ನಿರೂಪಿಸಿದರು. ದೇವಳದ ವತಿಯಿಂದ ಕಲಾವಿದರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here