ಬಾಲ್ಯವಿವಾಹಕ್ಕೆ ಉತ್ತೇಜಿಸಿರುವ ಆರೋಪದ ಪ್ರಕರಣ- ಪೂರ್ಣ ತನಿಖೆಗೆ ಮೊದಲೇ ಆರೋಪಿಗಳ ಖುಲಾಸೆ

0

ಪುತ್ತೂರು:ಅಪರೂಪದ ಪ್ರಕರಣವೊಂದರಲ್ಲಿ, ಬಾಲ್ಯ ವಿವಾಹಕ್ಕೆ ಉತ್ತೇಜಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೀಡಿದ್ದ ದೂರಿನ ಮೇರೆಗೆ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿದ್ದವರನ್ನು, ಪ್ರಕರಣದ ಪೂರ್ಣಪ್ರಮಾಣದ ತನಿಖೆಯಾಗುವ ಮೊದಲೇ ಪುತ್ತೂರು ನ್ಯಾಯಾಲಯ ಪ್ರಕರಣದಿಂದ ವಿಮೋಚನೆಗೊಳಿಸಿದೆ.

ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿದ್ದ ಶಾಂತಿ ಟಿ.ಹೆಗಡೆ ಎಂಬವರು ನೀಡಿದ್ದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ‘ದಿನಾಂಕ 14/11/2018ರಂದು ಉಪ್ಪಿನಂಗಡಿ ನೆಕ್ಕಿಲಾಡಿ ಆದರ್ಶ ನಗರದ ಸುಲೇಮಾನ್‌ರವರ ಮಗನಾದ ಮಹಮದ್ ಸಾದಿಕ್ ಎಂಬಾತನ ಜೊತೆ ಪುತ್ತೂರು ಕೂರ್ನಡ್ಕ ಮಸೀದಿಯ ಮೌಲಿಯಾದ ಬಂಬ್ರಾನ್ ಉಸ್ತಾದ್‌ರವರು ಅಪ್ರಾಪ್ತ ಬಾಲಕಿಯ ನಿಖಾ ಶಾಸ್ತ್ರವನ್ನು ನೆರವೇರಿಸಿ ಬಾಲ್ಯ ವಿವಾಹವನ್ನು ನಡೆಸಿರುತ್ತಾರೆ ಎಂಬಿತ್ಯಾದಿಯಾಗಿ, ಬಾಲಕಿಯ ಮಲತಾಯಿಯ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿದ್ದ ಶಾಂತಿ ಟಿ.ಹೆಗಡೆ ಅವರು, ಆರೋಪಿಗಳು ಬಾಲ್ಯ ವಿವಾಹಕ್ಕೆ ಉತ್ತೇಜನ ನೀಡಿದ್ದಾರೆ ಎಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರನ್ನು ಸಲ್ಲಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡ ತನಿಖಾಧಿಕಾರಿಗಳು ತನಿಖೆ ನಡೆಸಿ ಪ್ರ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.ಈ ನಡುವೆ ಆರೋಪಿಗಳು ತಮ್ಮ ಪರ ವಕೀಲರ ಮುಖಾಂತರ ಸದ್ರಿ ಪ್ರಕರಣದಿಂದ ವಿಮೋಚನೆ(ಡಿಸ್ಟಾರ್ಜ್) ಮಾಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸರಕಾರಿ ಅಭಿಯೋಜಕರು ತಕರಾರು ಸಲ್ಲಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಸದ್ರಿ ಪ್ರಕರಣದಲ್ಲಿ ಆರೋಪಿಸಲಾದ ಆರೋಪವು ಆಧಾರ ರಹಿತವಾದದ್ದು ಮತ್ತು ಆ ದಿನ ದೂರಿನಂತೆ, ಕೇವಲ ನಿಶ್ಚಿತಾರ್ಥ ಮಾತ್ರ ನೆರವೇರಿದ್ದು ಯಾವುದೇ ಕಾನೂನುಬಾಹಿರ ಬಾಲ್ಯ ವಿವಾಹ ನೆರವೇರಿರುವುದಿಲ್ಲ.ಮದುವೆ ನಡೆದಿದೆ ಎನ್ನುವುದಕ್ಕೆ ಹಾಲ್‌ನಲ್ಲೂ ದಾಖಲೆ ಇರುವುದಿಲ್ಲ ಹಾಗೂ ಅಭಿಯೋಜನೆಯು ಸದರಿ ಪ್ರಕರಣವನ್ನು ಸಂಶಯಾತೀತವಾದದ್ದು ಎಂದು ನಿರೂಪಿಸಲು ವಿಫಲವಾಗಿರುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅರ್ಚನಾ ಕೆ.ಉನ್ನಿತ್ತನ್‌ರವರು ಆರೋಪಿಗಳಾದ ಹಾಜಿ ಯು.ಟಿ ಅಬ್ದುಲ್ ಅಜೀಜ್, ಹಾಜಿರ, ಇಬ್ರಾಹಿಂ ಚಾಪಳ್ಳ, ಸುಲೇಮಾನ್, ಅಪ್ಪಾ, ಮೊಹಮ್ಮದ್ ಸಾದಿಕ್‌ರವರನ್ನು ಸದ್ರಿ ಪ್ರಕರಣದಿಂದ ವಿಮೋಚನೆಗೊಳಿಸಿರುತ್ತದೆ. ಆರೋಪಿಗಳ ಪರವಾಗಿ ವಕೀಲ ಮಹೇಶ್ ಕಜೆರವರುವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here