ಕಡಬ: ಕೆ ಎಫ್ ಡಿ ಸಿ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಒಡ್ಡಿದ ಪ್ರಕರಣ-ಆರೋಪಿಗಳನ್ನು ದೋಷ ಮುಕ್ತಗೊಳಿಸಿದ ಪುತ್ತೂರು ನ್ಯಾಯಾಲಯ

0

ಪುತ್ತೂರು: 9 ವರ್ಷಗಳ ಹಿಂದೆ ಕಡಬ ತಾಲೂಕು ಐತೂರು ಗ್ರಾಮದಲ್ಲಿ ನಡೆದ, ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಒಡ್ಡಿದ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ನ್ಯಾಯಾಲಯ ಆರೋಪಿಗಳೆಲ್ಲರನ್ನು ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.

ಕಳೆದ ದಿನಾಂಕ 14.12.2015 ರಂದು, ಕಡಬ ತಾಲ್ಲೂಕು, ಐತೂರು ಗ್ರಾಮದ ಗ್ರಾಮದ, ಒಟ ಕಜೆ ರಬ್ಬರ್ ತೋಟದ ಬದಿಯಲ್ಲಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸಿಬ್ಬಂದಿಗಳಾದ ಶಾಂತಪ್ಪ ಗೌಡ, ರಾಘವ, ಸೆಲ್ವೇಂದ್ರ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಆರೋಪಿಗಳಾದ ಹರೀಶ, ಬಾಲಸುಬ್ರಮಣ್ಯ, ಸುರೇಶ್, ಕರುಣಾಮೂರ್ತಿ, ಕುಮಾರ ವೇಲು ಸೇರಿಕೊಂಡು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರಿಗೆ ಬೆದರಿಕೆ ಒಡ್ಡಿ, ಅವರ ವಾಹನಗಳನ್ನು ಹಾನಿ ಗೊಳಿಸಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಿಗಳು ಕುಮಾರಧಾರ ರಬ್ಬರ್ ಘಟಕಕ್ಕೆ ಸೇರಿದ, ರಬ್ಬರ್ ಮರಗಳಿಂದ, ರಬ್ಬರ್ ಹಾಳೆಗಳನ್ನು ಕದ್ದು ತಂದು, ಮನ ಮೋಹನ್ ಎಂಬವರ ತೋಟದ, ತೆಂಗಿನ ಮರದಡಿಯಲ್ಲಿ ಬಚ್ಚಿಟ್ಟಿದ್ದು, ಅದನ್ನು ಪತ್ತೆಹಚ್ಚಿ ಸ್ವಾಧೀನಪಡಿಸುವ ಸಮಯ ಆರೋಪಿಗಳೆಲ್ಲರೂ ಸೇರಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಬ್ಬರ್ ತೋಟದ ಅಧೀಕ್ಷಕ ಜಿ ಎಸ್ ಕೊಡಿಯ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಡಬ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಪುತ್ತೂರಿನ ಎರಡನೇ ಹೆಚ್ಚುವರಿ ಕಿರಿಯ ವಿಭಾಗ ಸಿವಿಲ್ ನ್ಯಾಯಾಧೀಶರಾದ ಯೋಗೇಂದ್ರ ಅವರು, ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸಲು ಅಭಿಯೋಜನ ಪಕ್ಷ ವಿಫಲವಾದ ಹಿನ್ನೆಲೆಯಲ್ಲಿ, ಆರೋಪಿಗಳೆಲ್ಲರನ್ನು ದೋಷ ಮುಕ್ತಗೊಳಿಸಿ, ಬಿಡುಗಡೆಗೊಳಿಸಿ ಆದೇಶಿಸಿದೆ, ಆರೋಪಿಗಳ ಪರವಾಗಿ ಪುತ್ತೂರಿನ ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮತ್ತು ಸಾತ್ವಿಕ್ ಆರಿಗ ಬಿ ವಾದಿಸಿದ್ದರು.

LEAVE A REPLY

Please enter your comment!
Please enter your name here