ಪುತ್ತೂರು ಜಾತ್ರೆಗೆ ಬಂದಿದ್ದ ವ್ಯಕ್ತಿ-ಮಹಡಿಯಿಂದ ಬಿದ್ದು ಗಾಯ

0

ಪುತ್ತೂರು:ಪುತ್ತೂರು ಜಾತ್ರೆಗೆಂದು ಬಂದಿದ್ದ ವ್ಯಕ್ತಿ ದೇವಳದ ಆಡಳಿತ ಕಚೇರಿಯ ಬಳಿ ನೂತನ ಅನ್ನಛತ್ರದ ಬಳಿಯಿಂದ ನಿರ್ಮಾಣ ಹಂತದ ಮೇಲಂತಸ್ತಿಗೆ ತೆರಳಿ ಅಲ್ಲಿ ಆಯ ತಪ್ಪಿ ಕೆಳಗೆ ಬಿದ್ದು ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ವರದಿಯಾಗಿದೆ.

ಕೊಪ್ಪಳ ಮೂಲದ ಬಸವರಾಜು(೪೨ವ) ಎಂಬವರು ಗಾಯಗೊಂಡವರು.ಅವರು ಪುತ್ತೂರು ಮಾಸ್ಟರ್ ಪ್ಲಾನರಿ ಸಂಸ್ಥೆಯಲ್ಲಿ ಕೆಲಸಕ್ಕಿರುವ ಸಂಬಂಧಿಕರ ಮನೆಗೆ ಬಂದಿದ್ದು ಅಲ್ಲಿಂದ ಪುತ್ತೂರು ಜಾತ್ರೆಗೆ ಬಂದು ದೇವಳದ ಆಡಳಿತ ಕಚೇರಿಯ ಬಳಿಯ ಅನ್ನಛತ್ರದ ನಿರ್ಮಾಣ ಹಂತದ ಮಹಡಿಗೆ ನಿಷೇಧವಿದ್ದರೂ ಹತ್ತಿದ್ದರು.ಅಲ್ಲಿ ಅವರು ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಗಾಯಗೊಂಡ ಅವರನ್ನು ಜಾತ್ರೆಯ ಸಂದರ್ಭದಲ್ಲಿದ್ದ ತುರ್ತು ಆರೋಗ್ಯ ಸೇವಾ ಕೇಂದ್ರದ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here