ಕೊಂಬಾರು: ಓಡೋಳಿಯಲ್ಲಿ ರೈಲ್ವೇ ಸೇತುವೆ ಮುರಿದು 8 ವರ್ಷ ಕಳೆದರೂ ನಡೆಯದ ಕಾಮಗಾರಿ-ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ -ಬ್ಯಾನರ್ ಅಳವಡಿಕೆ

0

ಕಡಬ: ಕೊಂಬಾರು ಗ್ರಾಮದ ಕೆಂಜಾಳ, ಇಡಾಳ,ಕೊಲ್ಕಜೆ,ಪೊರ್ದೆಲ್ ಮೂಲಕ ಸುಂಕದಕಟ್ಟೆ, ಕಡಬ ಹಾಗೂ ಸುಬ್ರಹ್ಮಣ್ಯ ರೈಲ್ವೇ ಸ್ಟೇಷನ್ ಮೂಲಕ ನೆಟ್ಟಣ ಬಿಳಿನೆಲೆಗೆ ಸಂಪರ್ಕಿಸುವ ಓಡೋಳಿ ಎಂಬಲ್ಲಿ ಮುರಿದು ಬಿದ್ದಿರುವ ಕಬ್ಬಿಣದ ಸೇತುವೆಯ ಕಾಮಗಾರಿ ನಡೆಯದ ಹಿನ್ನೆಲೆಯಲ್ಲಿ ಆ ಭಾಗದ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದು ಈ ಬಗ್ಗೆ ಕೆಂಜಾಳದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.


ಸುಮಾರು 50 ವರ್ಷಗಳ ಹಿಂದೆ ದಕ್ಷಿಣ-ಪಶ್ಚಿಮ ರೈಲ್ವೆಯವರು ನಿರ್ಮಿಸಿದ ಕಬ್ಬಿಣದ ಸೇತುವೆಯು 8 ವರ್ಷಗಳ ಹಿಂದೆ ಮುರಿದು ಬಿದ್ದಿದ್ದು ಬಳಿಕ ಸೇತುವೆ ನಿರ್ಮಾಣಕ್ಕೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಲ್ಲಿಯ ಗ್ರಾಮಸ್ಥರು ಆರೋಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here