ಮಾಜಿ ನಗರಸಭಾ ಸದಸ್ಯೆ ರೇಖಾ ಯಶೋಧರ್ ರವರಿಗೆ ಪತಿವಿಯೋಗ

0

ಪುತ್ತೂರು: ಪುತ್ತೂರು ನಗರಸಭಾ ಸದಸ್ಯೆ ಶ್ರೀಮತಿ ರೇಖಾ ಯಶೋಧರ್ ರವರ ಪತಿ ಯಶೋಧರ್ ಕೆ(55ವ.) ರವರು ಅಸೌಖ್ಯದಿಂದ ಏ.19 ರಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಮೃತ ಯಶೋಧರ್ ಕೆ.ರವರು ಆರಂಭದಲ್ಲಿ ಮಣಿಪಾಲ್ ರಬ್ಬರ್ ಇಂಡಸ್ಟ್ರೀಸ್ ನಲ್ಲಿ ಕೆಲವು ವರ್ಷ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಪುತ್ತೂರಿನಲ್ಲಿ ಸ್ವಂತ ವಾಹನ ಖರೀದಿ ಮಾಡಿಕೊಂಡು ದುಡಿಯುತ್ತಿದ್ದರು. ಪ್ರಸ್ತುತ ಕಳೆದ ಹದಿನೈದು ವರ್ಷಗಳಿಂದ ಮರೀಲು ಭಾರತ್ ಇಂಡಸ್ಟ್ರೀಸ್ ನಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಯಶೋಧರ್ ರವರು ಪತ್ನಿ ಶ್ರೀಮತಿ ರೇಖಾ ಯಶೋಧರ್, ಪುತ್ರಿಯರಾದ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಧುಶ್ರೀ ಕೆ, ಪೂಜಾ ಕೆ.ರವರನ್ನು ಅಗಲಿದ್ದಾರೆ. ಮೃತರ ಮನೆಗೆ ರಾಜಕೀಯ ಮುಖಂಡರು, ಪುತ್ತೂರು ನಗರಸಭಾ ಅಧಿಕಾರಿಗಳು, ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿ, ಭಾರತ್ ಇಂಡಸ್ಟ್ರೀಸ್ ನ ಮಾಲಕರು ಹಾಗೂ ಸಿಬ್ಬಂದಿ ಸಹಿತ ಹಲವರು ಆಗಮಿಸಿ ಸಾಂತ್ವನ ನುಡಿದಿದ್ದಾರೆ.

LEAVE A REPLY

Please enter your comment!
Please enter your name here