ಉಜ್ಜೈನಿಯಲ್ಲಿ ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆ-ಧಾರಿಣಿ ಆರ್. ರಾವ್ ಗೆ ಚಿನ್ನದ ಪದಕ

0

ಪುತ್ತೂರು: 2023-24ನೇ ಸಾಲಿನಲ್ಲಿ ಆರ್ಟ್ ಕಾಲೇಜುಗಳಿಗೆ ಉಜ್ಜೈನಿಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಮಂಗಳೂರು ಮಹಾಲಸ ಕಾಲೇಜ್ ಆಫ್ ವಿಶ್ಯುವಲ್ ಆರ್ಟ್ ಕಾಲೇಜಿನ 3ನೇ ವರ್ಷದ ವಿದ್ಯಾರ್ಥಿನಿ ಧಾರಿಣಿ ಆರ್. ರಾವ್ ಅವರಿಗೆ ಚಿನ್ನದ ಪದಕ ಲಭಿಸಿದೆ.

ರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಈ ಚಿತ್ರಕಲಾ ಸ್ಪರ್ಧೆಯನ್ನು ಉಜ್ಜೈನಿಯ ಕಲಾವ್ ಆರ್ಟ್ ನ್ಯಾಸ್ ಸಂಸ್ಥೆ ಆಯೋಜಿಸಿತ್ತು. ಕ್ರಿಯೇಟಿವ್ ಆರ್ಟ್ ವಿಭಾಗದಲ್ಲಿ ಧಾರಿಣಿ ಆರ್.ರಾವ್ ಬಿಡಿಸಿರುವ ಚಿತ್ರಕ್ಕೆ ಚಿನ್ನದ ಪದಕ ಲಭಿಸಿದೆ. ಧಾರಿಣಿ ಅವರು ಮೂಲತಃ ಪುತ್ತೂರು ನಿವಾಸಿಯಾಗಿದ್ದು ಪತ್ರಕರ್ತ ರಾಜೇಶ್ ರಾವ್ ಪುತ್ತೂರು ಮತ್ತು ಸ್ವಪ್ನಾ ಅವರ ಪುತ್ರಿ.

LEAVE A REPLY

Please enter your comment!
Please enter your name here