ಕಾಂಗ್ರೆಸ್‌ ನ ʼನನ್ನ ಬೂತ್ ನಾನು ಅಭ್ಯರ್ಥಿʼ‌ ಕಾರ್ಯಕ್ರಮ-ಕೆದಿಲದಲ್ಲಿ ಎನ್ಎಸ್ ಯುಐ ಉಪಾಧ್ಯಕ್ಷ ಫರೂಕ್ ನೇತೃತ್ವದಲ್ಲಿ ಮನೆಮನೆಗೆ ಭೇಟಿ

0

ಪುತ್ತೂರು: ಕಾಂಗ್ರೆಸ್‌ ಪಕ್ಷದ ವತಿಯಿಂದ ಇಂದು ನಮ್ಮ ಬೂತ್ ನಾನು ಅಭ್ಯರ್ಥಿ ಕಾರ್ಯಕ್ರಮದನ್ವಯ ಎನ್ಎಸ್ ಯುಐ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಫರೂಕ್ ಬಯಬೆ ನೇತೃತ್ವದಲ್ಲಿ ಕೆದಿಲ ಗ್ರಾಮದ ಮನೆಮನೆಗೆ ಭೇಟಿ ನೀಡಿ, ದ.ಕ ಲೋಕಸಭಾ ಅಭ್ಯರ್ಥಿ ಕಾಂಗ್ರೆಸ್‌ ನ ಪದ್ಮರಾಜ್ ಆರ್ ಪೂಜಾರಿ ಪರ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೆದಿಲ ಪಂಚಾಯತ್ ಸದಸ್ಯ ಹಬೀಬ್ ಮೊಹ್ಸಿನ್, ಉನೈಸ್ ಗಡಿಯಾರ, ಅಬ್ದುಲ್ ಖಾದರ್ ಪಾಟ್ರಕೋಡಿ, ಉನೈಸ್ ಪಾಟ್ರಕೋಡಿ, ಸಿರಾಜ್ ಕೆತ್ತೆಪುಳಿ, ಬೂತ್ ಅಧ್ಯಕ್ಷ ಮೋನು, ಮಜೀದ್, ಸಾದಿಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here