ಬಲ್ನಾಡು ಉಳ್ಳಾಲ್ತಿಯಮ್ಮನಿಗೆ ಕೊಪ್ಪರಿಗೆ ಅರ್ಪಿಸಿದ ಶಾಸಕ ರೈ ಅಭಿಮಾನಿಗಳು

0

ಪುತ್ತೂರು: ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಬಲ್ನಾಡು ನೇಮಕ್ಕೆ ಆಗಮಿಸಿ ಅಶೋಕ್ ರೈ ಅವರು ದೈವದ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದ್ದರು. ಆ ಸಂಧರ್ಭದಲ್ಲಿ ಕಾರ್ಯಕರ್ತರು ಚುನಾವಣೆಯಲ್ಲಿ ಅಶೋಕ್ ರೈಗಳು ವಿಜಯಶಾಲಿಯಾದರೆ ದೈವಕ್ಕೆ ಕೊಪ್ಪರಿಗೆ ಸಲಿಸುವುದಾಗಿ ಹರಕೆ ಸಂಕಲ್ಪಿಸಿದಂತೆ ಅದನ್ನು ನೆರವೇರಿಸಿದ್ದಾರೆ.


ವಿಜಯೀ ಶಾಸಕರಾಗಿ ರೈಗಳು ಈ ಬಾರಿ ನೇಮದಲ್ಲಿ ಪಾಲ್ಗೊಂಡ ವೇಳೆಯಲ್ಲಿ ತಮ್ಮ ಸಂಕಲ್ಪ ಈಡೇರಿದ ನಿಮಿತ್ತ ಶಾಸಕರ ಸಮ್ಮುಖದಲ್ಲೇ ಉಳ್ಳಾಲ್ತಿಯಮ್ಮನಿಗೆ ಕಾರ್ಯಕರ್ತರು ಕೊಪ್ಪರಿಗೆಯನ್ನು ಸಮರ್ಪಿಸಿದರು. ಈ ಸಂದರ್ಭದಲ್ಲಿ ರವಿ ಕುಂಜತ್ತಾಯ, ಸತೀಶ್ ಗೌಡ ಒಳಗುಡ್ಡೆ, ನವೀನ್ ಕರ್ಕೇರಾ, ನಾರಾಯಣ ಗೌಡ ಕುಕ್ಕುತ್ತಡಿ, ಪಂಜಿಗುಡ್ಡೆ ಈಶ್ವರ ಭಟ್, ಕಾವು ಹೇಮನಾಥ ಶೆಟ್ಟಿ ಮುಂತಾದವರು ಜೊತೆಗಿದ್ದರು.

LEAVE A REPLY

Please enter your comment!
Please enter your name here